- ಸಿಹಿ ಹಂಚಿ ಸಂಭ್ರಮ ಪಟ್ಟ ಮುಸ್ಲಿಂ ಭಾಂದವರು
- ಹಿಂದೂ ಮುಸ್ಲಿಂ ಭಾಂದವರು ಸೇರಿ ಆಚರಣೆ ಮಾಡಿ ಮಾದರಿಯಾದರು

ಚಿಕ್ಕಮಗಳೂರು : ಕೊಪ್ಪ ತಾಲೂಕಿನ ಬಂಡಿಗಡಿ ಜಾಮಿಯ ಮಸೀದಿಯಲ್ಲಿ ಸಡಗರ ಹಾಗೂ ಸಂಭ್ರಮದಿಂದ 78 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಜಾಮುದೀನ್ ಬಂಡಿಗಡಿ ವಹಿಸಿದ್ದರು.ಇನ್ನೂ ಈ ಕಾರ್ಯಕ್ರಮದಲ್ಲಿ ಹಿಂದೂ ಮುಸ್ಲಿಂ ಧರ್ಮದವರು ಸೇರಿ ಏಕತೆಯಿಂದ ಆಚರಿಸಿದ್ದು ಇತರರಿಗೆ ಮಾದರಿಯಾಗಿತ್ತು.ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬಂಡಿಗಡಿ ಗ್ರಾಂ ಪಂ ಅಧ್ಯಕ್ಷರಾದ ಬಿ ಈ ಮಹಮದ್ ಹುಸೇನ್, ಶ್ರೀಧರ್ ಅಂಬಳಿಕೆ, ದಿವಾಕರ್ ಭಟ್ ಬಂಡಿಗಡಿ, ಸುರೇಶ್ ಹೆಚ್ ಕೆ,ಶುಕುರ್ ಅಹಮದ್ (ಭಾರತೀಯ ಸೇನೆ), ಪಿ ಎಸ್ ಐ ಮಂಜುನಾಥ್, ಕೌಸರ್ ಅಲಿನೂರಿ (ಗುರುಗಳು )ಫೈರೋಜ್ ಅಕ್ರಮ್ (ಮುನಿಯರ್) ಹಾಗೂ ಬಂಡಿಗಡಿಯ ಜಾಮಿಯಾ ಮಸೀದಿಯ ಜಮಾತ್ ಭಾಂದವರು ಇದ್ದರು.


