ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕುಪ್ಪಳ್ಳಿ ಸಮೀಪದ ಗಿಣಿಯ ಎಂಬ ಗ್ರಾಮ ದ ಗುರುಮೂರ್ತಿ ಭಟ್ ಎಂಬುವರ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಹಸುವಿನ ಕೊಟ್ಟಿಗೆ ಸಂಪೂರ್ಣ ಸುಟ್ಟು ಹೋಗಿರುವ ಘಟನೆ ನಡೆದಿದೆ.ಮನೆಯಲ್ಲಿ ಕೂಡಿಟ್ಟಿದ್ದ 10 ಮೂಟೆ ಅಡಿಕೆ, 10 ಮೂಟೆ ಕಾಳುಮೆಣಸು, ಬೈಕ್, ಅಡಿಕೆ ಮಿಷನ್ ಸೇರಿ ಅಂದಾಜು 50 ಲಕ್ಷಕ್ಕೂ ಅಧಿಕ ಹಾನಿಯಾಗಿದೆ ಎಂದು ತಿಳಿದು ಬಂದಿದೆ.ಮನೆಯ ಎದುರಿಗೆ ಇದ್ದ ಹುಲ್ಲಿನ ಕುತ್ರೆ ಸೇರಿ ಹಲವು ವಸ್ತುಗಳು ಹಾನಿಯಾಗಿದೆ.ವರದಿ :ಅಕ್ಷಯ್

Leave a Reply

Your email address will not be published. Required fields are marked *