ಸತ್ಯಶೋಧ ನ್ಯೂಸ್
- ರೈತರಿಗೆ ಗೌರವ ಕೊಡಿ ಇಲ್ಲವಾದಲ್ಲಿ ತಾಲೂಕು ಕಚೇರಿಗೆ ಬೀಗ ಹಾಕ್ತಿವಿ – ತೀ ನಾ ಶ್ರೀನಿವಾಸ್

ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತಾಲೂಕು ಕಛೇರಿ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಮಲೆನಾಡು ಕ್ರಿಯಾ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಸಮಾನ ಮನಸ್ಕ ಸಂಘಟನೆ ವತಿಯಿಂದ ಒತ್ತುವರಿ ತೆರವು ಮಾಡುತ್ತಿರುವ ಅರಣ್ಯ ಇಲಾಖೆ ವಿರುದ್ಧ ಬೃಹತ್ ಪತಿಭಟನೆ ನಡೆಸಲಾಯಿತು.ಸರ್ಕಾರ ಕೊಟ್ಟಿರುವ ಹಕ್ಕು ಪತ್ರವನ್ನುಅರಣ್ಯ ಇಲಾಖೆ ರದ್ದು ಮಾಡಿ ರೈತರ ಅಕ್ರೋಶಕ್ಕೆ ಕಾರಣವಾಗಿದೆ. ಈ ಹೋರಾಟದಲ್ಲಿ ಪಕ್ಷಾತೀತವಾಗಿ ಎಲ್ಲಾ ಪಕ್ಷದ ಮುಖಂಡರು ಭಾಗವಹಿಸಿದ್ದು ರೈತರ ಪರ ನಿಂತಿದ್ದು ಶ್ಲಾಘನಿಯವಾಗಿತ್ತು.ಮಲೆನಾಡಿನ ರೈತರು ಅಂದಿನಿಂದ ಇಂದಿನ ವರೆಗೂ ಹೋರಾಟ ನಡೆಸಿಕೊಂಡೆ ಬಂದವರು, ರೈತರ ಜಮೀನಿನ ವಿಷಯಕ್ಕೆ ಬಂದರೆತಾಲೂಕು ಕಚೇರಿಗೆ ಬೀಗ ಹಾಕುತ್ತೇವೆ.ಕಂದಾಯ ಸಚಿವ, ಉನ್ನತ ಮಟ್ಟದಲ್ಲಿ, 50 ವರ್ಷದ ದರ್ಖಾಸು, ಬಗರ್ ಹುಕುಂ, ಸಾಗುವಳಿ, ಪಹಣಿ, ತೋಟ ಮಾಡಿದ ಜಮೀನು, ಜಿಲ್ಲೆಯ ಜನ ಎಚ್ಚರದಿಂದ ಇರಬೇಕು, ಕಂದಾಯ ಸರ್ಕಾರದ್ದು ಅಲ್ಲವಾ, ತಾಲ್ಲೂಕು ಕಚೇರಿ ಯಾಕೆ ಬೇಕು, ಜಿಲ್ಲಾಧಿಕಾರಿ ಕಚೇರಿ ಬಾಗಿಲು ಹಾಕಬೇಕು,

ಹಗಲುರಾತ್ರಿ, ಪಹಣಿ ಬದಲಿಸಿದ್ದಾರೆ. ಅರಣ್ಯ , ಕಾಡು ಲೂಟಿ, ಗಂಧ, ಬೀಟೆ ಲೂಟಿ ಮಾಡಿದ್ದು ಅರಣ್ಯ ಅಧಿಕಾರಿಗಳು, ಶರಾವತಿ ವಿದ್ಯುತ್ ಯೋಜನೆಯಿಂದ 4 ಲಕ್ಷ, ಸುಪ್ರೀಂಕೋರ್ಟ್ ಆದೇಶ ಆಗಿಲ್ಲ, ಬಡವರು, ಅನಕ್ಷರಸ್ಥರು, ಅರ್ಜಿ ಇತ್ಯರ್ಥ ಆಗುವವವರೆಗೆ 3 ಎಕರೆ ತೆರವು ಮಾಡಿದ್ದರೆ, 3 ಎಕರೆ, 1992, ಸರ್ಕಾರಿ ಆದೇಶ ಆಗಬೇಕು, ಸರ್ಕಾರದ ಕೆಟ್ಟ ಪ್ರಾಣಿಗಳು, ಮಾನ ಮರ್ಯಾದೆ ಇದ್ಯಾ, 80 ಜನ ಶಾಸಕರು ಇದ್ದಾರೆ. ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ವಿಫಲವಾಗಿದೆ ಎಂದು ತೀ ನಾ ಶ್ರೀನಿವಾಸ್ ಅಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಮಲೆನಾಡು ಕ್ರಿಯಾ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಸಮಾನ ಮನಸ್ಕ ಸಂಘಟನೆ ಜೊತೆಗೆ ರೈತರು ಈ ಬೃಹತ್ ಮೆರವಣಿಗೆ ಹಾಗೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.



