
ಫೋಟೋ ಕೃಪೆ ಗೂಗಲ್
ದೇಶದಲ್ಲಿ ಶಿಕ್ಷಣದಿಂದಲೇ ಗುಣಮಟ್ಟದ ಜೀವನ, ಪ್ರಗತಿ ಸಾಧಿಸಲು ಸಾಧ್ಯ ಎಂದು ಮೊಟ್ಟಮೊದಲು ದೇಶಾದ್ಯಂತ ಸಾರಿದ ಸಂತ ಎಂದರೆ ಅದು ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದು ನುಗ್ಗಿ ಮಂಜುನಾಥ್ ತಿಳಿಸಿದರು. ಇತ್ತೀಚಿಗೆ ಕುದುರೆಗುಂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘದವರು ನಡೆಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತು ಭಾಷಣ ಸ್ಪರ್ಧೆಯಲ್ಲಿ ಮಾತನಾಡಿದ ಅವರು ವಯಸ್ಕರ ಶಿಕ್ಷಣದ ಕಲ್ಪನೆ ಹೊಂದಿದ್ದ ಅವರು ಮಕ್ಕಳಿಗೆ ದೇವರ ಪೂಜಕ್ಕಿಂತ ಓದಿನ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಎಂದು ಹೇಳುವ ಮೂಲಕ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ ಮಹಾನ್ ಚೇತನ ನಾರಾಯಣ ಗುರುಗಳು ಅವರು ಅವರು ಅಕ್ಷರ ಕ್ರಾಂತಿಗೆ ಮುನ್ನುಡಿ ಬರೆದ ಮೊದಲ ಸಂತ ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದು ಸಂಘಟಕ ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನುಗ್ಗಿ ಮಂಜುನಾಥ್ ಬಹುಮಾನ ವಿತರಿಸಿ ಮಾತನಾಡಿದರು. 12ಕ್ಕೂ ಹೆಚ್ಚು ಪ್ರೌಢಶಾಲೆಗಳು ಭಾಗವಹಿಸಿದ್ದು ಅದರಲ್ಲಿ ವೆಂಕಟೇಶ್ವರ ಶಾಲೆ ಮೊದಲ ಸ್ಥಾನ ಪಡೆದರೆ ನಚಿಕೇತ ಶಾಲೆ ಎರಡು ಹಾಗೂ ಮೂರನೇ ಸ್ಥಾನವನ್ನು ಪಡೆದಿದೆ. ಈ ಸಂದರ್ಭ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ, ಹೆಚ್.ಎಲ್. ದೀಪಕ್ ಕುದುರೆಗುಂಡಿ, ಹೇಮಂತ್ ಶೆಟ್ಟಿ ಕುದುರೆಗುಂಡಿ, ನಾರಾಯಣ ಗುರು ಸಂಘದ ಅಧ್ಯಕ್ಷರಾದ ಪ್ರಕಾಶ್ ಪೂಜಾರಿ, ವೆಂಕಟೇಶ್, ಪಾಪಣ್ಣ ಹಾಗೂ ಮುಖ್ಯ ಶಿಕ್ಷಕರಾದ ಧನಂಜಯ್ ಸೇರಿದಂತೆ ಇನ್ನಿತರರಿದ್ದರು.


