ಹೊಸನಗರ ಪಟ್ಟಣದ ಶಿವಪ್ಪನಾಯಕ ರಸ್ತೆಯಲ್ಲಿ ವಾಸವಾಗಿದ್ದ ಗೇರುಪುರ ಮೂಲದ ದಿವಂಗತ ಪ್ರಸನ್ನ ಎಂಬವರ ಪತ್ನಿ 38 ರ ಹರೆಯದ ಸಂಗೀತ ಎಂಬವರಿಗೆ ಇದೆ ಜುಲೈ 14ರಂದು ನಾಯಿ ಕಚ್ಚಿದ್ದು ಈ ಬಗ್ಗೆ ಹೊಸನಗರ ಹಾಗೂ ಶಿವಮೊಗ್ಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 23ರ ಬೆಳಿಗ್ಗೆ 11:25 ಕ್ಕೇ ಆಕೆ ಚಿಕಿತ್ಸೆ ಪಡೆಯುತ್ತಿದ್ದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ದುರಂತ ಸಾವಿಗೀಡಾದ ಬಗ್ಗೆ ತಿಳಿದು ಬಂದಿದೆ.ಹೊಸನಗರ ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ


