- ಮಲೆನಾಡ ಸಾಧಕನಿಗೆ ಒಲಿದ ಅದೃಷ್ಟ
- ಪ್ರೀತಿಯ ವಿದ್ಯಾರ್ಥಿಗೆ ಶರತ್ ಶೆಟ್ಟಿ ಅಭಿನಂದನೆ

ಫೋಟೋ ಕೃಪೆ -ಕಲರ್ಸ್ ಕನ್ನಡ
ಶಿವಮೊಗ್ಗ : ಮಲೆನಾಡಿನ ಹೆಮ್ಮೆಯ ಕಲಾವಿದ ಹುಲಿ ಕಾರ್ತಿಕ್ ಗಿಚ್ಚಿ ಗಿಲಿ ಗಿಲಿ ಸೀಸನ್ -೦೩ ಕಾರ್ಯಕ್ರಮದ ವಿನ್ನರ್ ಆಗಿದ್ದಾರೆ.ತೀರ್ಥಹಳ್ಳಿಯಲ್ಲಿ ಹುಲಿ ಕಾರ್ತಿಕ್ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಬಾಲ್ಯ ದಿಂದಲೂ ಬಡತನದಲ್ಲಿ ಬಂದ ಯುವಕ ಇದೀಗ ಸಾಧಕರ ಪಟ್ಟಿಯಲ್ಲಿ ಇತಿಹಾಸ ನಿರ್ಮಿಸಿದ್ದು ಶಿವಮೊಗ್ಗ ಜಿಲ್ಲೆಗೆ ಹೆಮ್ಮೆ ಪಡುವ ವಿಷಯವಾಗಿದೆ.ಸು ೧೫ದಿನಗಳಿಂದ ಮಲೆನಾಡಿನಲ್ಲಿ ಹುಲಿ ಕಾರ್ತಿಕ್ ಗೆಲ್ಲಿಸಲು ಸ್ನೇಹಿತರು ಆಪ್ತರು ಮನವಿ ಮಾಡಿದ್ದು ಇದೀಗ ಜನರು ಹುಲಿ ಕಾರ್ತಿಕ್ರನ್ನ ವಿನ್ನರ್ ಆಗಿ ನೋಡಲು ಬಯಸಿ ವೋಟ್ ಮಾಡಿ ಗೆಲ್ಲಿಸಿದ್ದಾರೆ.ಈ ವೇಳೆ ಅವರ ಗುರುಗಳಾದ ಶರತ್ ಶೆಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.



