ಕಲಬುರಗಿ:ಶಾಲಾ ಬಸ್ ಹರಿದು ಮೂರು ವರ್ಷದ ಬಾಲಕಿ ಸಾವನ್ನಪ್ಪಿರುವ ದಾರುಣ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ.ಖುಷಿ ಬನ್ನಟ್ಟಿ (3) ಮೃತ ದುರ್ದೈವಿಯಾಗಿದ್ದು ಇವಳು ರಾಜಶೇಖರ್ ಎಂಬುವವರ ಪುತ್ರಿಯಾಗಿದ್ದಾಳೆ. ಬಸ್ ನಲ್ಲಿ ಬಂದ ಅಣ್ಣನ ಕರೆದುಕೊಂಡು ಬರಲು ಹೋದಾಗ ಬಸ್ ಹಿಂದೆ ಬರುವ ಸಮಯದಲ್ಲಿ ಬಾಲಕಿಯ ಮೇಲೆ ಹರಿದಿದೆ. ಈ ಸಂಬಂಧ ಚಾಲಕ ಶ್ರೀಶೈಲ ಎಂಬಾತನನ್ನು ಅಫಜಲ ಪುರ ಪೊಲೀಸರು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *