

ಶಿವಮೊಗ್ಗ :ಧಾರ್ಮಿಕ ಕ್ಷೇತ್ರವಾದ ಹಣಗೆರೆಯಲ್ಲಿ ರಾಷ್ಟ್ರ ವಿರೋಧಿ ಪ್ಲೆಕ್ಸ್ ಹಾಕಿದ್ದು ಭಾರಿ ಆಕ್ರೋಶ ವ್ಯಕ್ತವಾಗಿದೆ. ಈ ಸಂಬಂಧ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಈದ್ ಮಿಲಾದ್ ಆಚರಣೆಯ ಸಂದರ್ಭದಲಿ ಪ್ಯಾಲೆಸ್ತೀನ್ ಪರವಾಗಿ ಭಾರತ ವಿರೋಧಿ ನೀತಿಯನ್ನು ಪ್ರತಿಪಾದಿಸುವ ಪ್ಲೆಕ್ಸ್ ಅಳವಡಿಕೆಯ ಕಾರ್ಯ ಕಿಡಗೇಡಿಗಳಿಂದ ನಡೆದಿದ್ದು, ಇದು ತೀರ್ಥಹಳ್ಳಿಯಂತಹ ಶಾಂತಿ ಸೌಹಾರ್ದತೆಯ ಕ್ಷೇತ್ರದ ಘನತೆಗೆ ದಕ್ಕೆ ತರುವ ವಿಚಾರವಾಗಿದೆ ಎಂದು ಆರಗ ಆಕ್ರೋಶ ವ್ಯಕ್ತಪಡಿಸಿದರು. ಹಾಗೂ ಕೂಡಲೇ ಹಣಗೆರೆಯ ಪ್ಯಾಲೆಸ್ತೀನ್ ಪರವಾದ ಪ್ಲೆಕ್ಸ್ ಅಳವಡಿಕೆ ಪ್ರಕರಣದ ಹಿಂದಿನ ಶಕ್ತಿಗಳ ಬಗ್ಗೆ ಹಾಗೂ ಅವರ ಸಂಘಟನೆಯ ಮೂಲದ ಬಗ್ಗೆ ಸೂಕ್ತ ತನಿಖೆ ಕೈಗೊಂಡು, ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸಿ ಸಾರ್ವಜನಿಕರಲ್ಲಿರುವ ಆತಂಕವನ್ನು ದೂರಪಡಿಸಬೇಕೆಂದು ಮನವಿಯಲ್ಲಿಯಲ್ಲಿದೆ.ಇನ್ನು ಇದೆ ವಿಚಾರವಾಗಿ ಸ್ಥಳೀಯ ಆಡಳಿತ ಎಷ್ಟು ಮಟ್ಟಕ್ಕೆ ಕ್ರಮ ತೆಗೆದುಕೊಂಡಿದೆ. ಅಥವಾ ಗಾಢ ನಿದ್ದೆಯಲ್ಲಿದೆಯಾ ಎಂಬುದು ಸ್ಥಳೀಯರ ಕಾಡುವ ಯಕ್ಷ ಪ್ರಶ್ನೆಯಾಗಿದೆ. ಮುಂದೆ ಇನ್ನೆಂದು ಈ ಆಚಾತುರ್ಯ ನಡೆಯಬಾರದು ಎಂಬುದು ಈ ವರದಿಯ ಆಶಯ


