- ಸಣ್ಣ ಆಚಾತುರ್ಯ ಬಾಳನ್ನೇ ಕೊನೆಗೊಳಿಸಬಹುದು ಎಚ್ಚರ
ತಾಲೂಕಿನ ಹೊನ್ನೇತಾಳು ಗ್ರಾಂ ಪಂ ವ್ಯಾಪ್ತಿಯ ಶಿರೂರು ಪೋಸ್ಟ್ ಆಫೀಸ್ ಮುಂಭಾಗ ಇರುವ ಪಾಳು ಮನೆಯ ಬಾಗಿಲಲ್ಲಿ ಕೊಡಲಿ ಹುಳ ಗೂಡು ಕಟ್ಟಿದ್ದು, ಸಣ್ಣ ಆಚಾತುರ್ಯ ನಡೆದು ಗೂಡಿಗೆ ತೊಂದರೆಯಾದರೆ ಶಿರೂರು ಗ್ರಾಮಕ್ಕೆ ಕೊಡಲಿ ಹುಳದ ಪೆಟ್ಟು ತಿನ್ನಬೇಕಾಗುವ ಪರಿಸ್ಥಿತಿ ಎದುರಾಗಲಿದೆ.ಕೂಡಲೇ ಈ ಬಗ್ಗೆ ಗ್ರಾಮಸ್ಥರು, ಪ್ರಮುಖರು ಗಮನಿಸಿ ತೆರವುಗೊಳಿಸಲು ಸತ್ಯಶೋಧ ಮಾಧ್ಯಮ ಕೋರಿದೆ.


