ತೀರ್ಥಹಳ್ಳಿ: ಸುಪ್ರಸಿದ್ದ ರಾಮೇಶ್ವರ ದೇವಸ್ಥಾನದಲ್ಲಿ ಅಕ್ಟೋಬರ್ 3 ರಿಂದ 12ರವರೆಗೆ ಸನ್ನಿಧಿಯಲ್ಲಿ ನವರಾತ್ರಿ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದ್ದು, ಪ್ರತಿ ದಿನ “ಸಪ್ತಶತೀ ಪಾರಾಯಣ” , ಪಂಚಾಮೃತ ಅಭೀಷೇಕ, ಕುಂಕುಮಾರ್ಚನೆ, ರುದ್ರಾಭೀಷೇಕ, ಮಹಾಮಂಗಳಾರತಿ ಮೊದಲಾದ ಉಪಚಾರಗಳಿಂದ ಶ್ರೀ ಸಾನ್ನಿಧ್ಯದಲ್ಲಿ ದೇವತಾ ಕಾರ್ಯ ನಡೆಯಲಿದೆ. ತಾ|| 12.10.2024 ನೇ ಶನಿವಾರ ಬೆಳಿಗ್ಗೆ ವಿಜಯದಶಮಿಯಂದು “ದುರ್ಗಾಹೋಮ”ಸಂಪನ್ನಗೊಳ್ಳಲಿದೆ. ಭಗವದ್ಭಕ್ತರು ಈ ವಿಶೇಷ ದೇವ್ಯತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.
ವಿ.ಸೂ:ಸಪ್ತಶತೀ ಪಾರಾಯಣ, ದುರ್ಗಾಹೋಮ ಸೇವೆ ಮಾಡಿಸಲು ಇಚ್ಚಿಸುವ ಭಕ್ತಾಧಿಗಳು ಮುಂಚಿತವಾಗಿ ದೇವಸ್ಥಾನದ ಅರ್ಚಕರಲ್ಲಿ ಹೆಸರು, ರಾಶಿ, ನಕ್ಷತ್ರ ನೋಂದಾಯಿಸಲು ಕೋರಿದೆ.



