Oplus_0
  • ಸತತ 3 ಬಾರಿ ಮರು ಆಯ್ಕೆಯಾದ ನಿತ್ಯಾನಂದ ರಿಗೆ ಸತ್ಯಶೋಧ ಅಭಿನಂದನೆ

ಆಗುಂಬೆ : ತೀರ್ಥಹಳ್ಳಿ ತಾಲೂಕಿನ ಮಾದರಿ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಹೊನ್ನೇತಾಳು ಶಾಲೆಯಲ್ಲಿ ಎಸ್ ಡಿ ಎಂ ಸಿ ಪದಾಧಿಕಾರಿಗಳ ಪುನರಾಯ್ಕೆ ಪ್ರಕ್ರಿಯೆ ನಡಿದಿದ್ದು, ನಿತ್ಯಾನಂದ ಅಣುಗೋಡು ಅಧ್ಯಕ್ಷರಾಗಿ ಒಮ್ಮತದಿಂದ ಆಯ್ಕೆಯಾಗಿದ್ದಾರೆ. ಶಾಲೆಯ ಯಶಸ್ಸಿಗೆ ಶ್ರಮಿಸಿದ ನಿತ್ಯಾನಂದ ತಮ್ಮ ಮನೆಗಿಂತ ಶಾಲೆಯ ಅಭಿವೃದ್ಧಿಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದು ಶಾಲೆಯು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳುವಲ್ಲಿ ಹಾಗೂ ಮೊದಲು 19 ಮಕ್ಕಳಿಂದ 120 ಮಕ್ಕಳ ಪ್ರವೇಶಕ್ಕೆ ಕಾರಣರಾಗಿದ್ದು ಗಮನಾರ್ಹ.ಇದೆ ವೇಳೆ ಉಪಾಧ್ಯಕ್ಷರಾಗಿ ಶಶಿಕಲಾ ಚಂದ್ರಹಾಸ್ ಶೀರನಕೊಡಿಗೆಸದಸ್ಯರಾಗಿ ಪ್ರಸನ್ನ ಹೋನ್ನೆತಾಳು, ಸುಧಾಕರ ಕರಡಿಕೋಡ್,ಸಚಿನ್ ಬೆಳ್ಳೂರು,ಪ್ರಶಾಂತ್ ನೇಗಿಲಯೋಗಿ,ಪ್ರದೀಪ್ ಶಿವಳ್ಳಿ,ಪ್ರಶಾಂತ ಕುಂದ,ಸುರೇಂದ್ರ ವಾರಳ್ಳಿ,ಪ್ರಕಾಶ್ ಹಾಲುಗೋಡಿಗೆ,ಮಹಿಳಾ ಸದಸ್ಯರು ಶ್ರೀಮತಿ ದಿವ್ಯಶ್ರೀ ವಿವೇಕ್ ಭಟ್ ಬೆಟ್ಗೇರಿ,ಶ್ರೀಮತಿ ಸಂಗೀತ ವಿನಯ್ ಕೆಂದಾಳ ಬೈಲು,ಕಾವ್ಯ ಅಮಿತ್ ರಾಜ್ ಹೊನ್ನೇತಾಳು ತಾಳು,ಶ್ರೀಮತಿಮಂಜುಳ ಸತೀಶ್ ತಲ್ಲೂರ್ ಅಂಗಡಿ,ಅನುಷ ರಾಘವೇಂದ್ರ ನಂಟೂರು,ಗೀತಾಮಹೇಶ್ ಕೆಂದಾಳಬೈಲು ಮೀನಾಕ್ಷಿ ಮಂಜುನಾಥ್ ,ಶ್ರೀಮತಿ ಫಾತಿಮಾ ಶಮೀಮ್ ಊರ್ಗೋಡು ಆಯ್ಕೆಯಾಗಿದ್ದಾರೆ.ಇದೆ ವೇಳೆ ಸಹಕರಿಸಿದ ಹಳೆಯ ಎಸ್ ಡಿ ಎಂ ಸಿ ತಂಡ, ಹಿರಿಯ ವಿದ್ಯಾರ್ಥಿಗಳು, ಗ್ರಾಮಸ್ಥರಿಗೆ ಸತ್ಯಶೋಧ ಮಾಧ್ಯಮ ಧನ್ಯವಾದ ತಿಳಿಸಿದೆ ಹಾಗೂ ನೂತನವಾಗಿ ಆಯ್ಕೆಯಾದ ಎಸ್ ಡಿ ಎಂ ಸಿ ತಂಡಕ್ಕೆ ಅಭಿನಂದಿಸಿದೆ. ಈ ಕಾರ್ಯಕ್ರಮದಲ್ಲಿ ನೋಡಲ್ ಅಧಿಕಾರಿಯಾಗಿ ಮಹಮ್ಮದ್ ಸಾಧಿಕ್ ಅಹಮದ್ ನಾಲೂರು ಕ್ಲಸ್ಟರ್ ಸಿ ಆರ್ ಪಿ ಪ್ರಭಾರಿ ಮುಖ್ಯ ಶಿಕ್ಷಕರಾದ ಶ್ರೀಮತಿ ಶಿಲ್ಪ ಎನ್ಎಸ್ ಹಾಗೂ ಸಹಶಿಕ್ಷಕರಾದ ಶ್ರೀಮತಿ ಅಶ್ವಿನಿ,ಹೊನ್ನೇ ತಾಳು ಮಾಜಿ ಅಧ್ಯಕ್ಷರು ಹಾಲಿ ಗ್ರಾಮ ಪಂಚಾಯತ್ ಸದಸ್ಯರು ಮತ್ತು ನಾಮನಿರ್ದೇಶಿತ ಸದಸ್ಯರು ಹೊನ್ನೇತಾಳು ಎಸ್ ಡಿ ಎಂ ಸಿ ಬಿಬಿ ಮಂಜುನಾಥ್, ನಂಟೂರ್ ಗ್ರಾಮ ಪಂಚಾಯತ್ ಸದಸ್ಯರಾದ ರಾಘವೇಂದ್ರ ಕುಂದಾದ್ರಿ ಇದ್ದರು.

Oplus_0
Oplus_0

Leave a Reply

Your email address will not be published. Required fields are marked *