- ಅಡಿಕೆ ಮರಗಳಲ್ಲಿ ಕೊಳೆ ರೋಗ- ರೈತ ಕಂಗಾಲು
- ಎರ್ಟೆಲ್ ಗ್ರಾಹಕರ ಪರದಾಟ ಪೋರ್ಟ್ ಮಾಡಲು ಸಿದ್ಧತೆ

ಶಿವಮೊಗ್ಗ : ಜಿಲ್ಲೆಯ ಹಲವು ತಾಲೂಕಿನ ಹಳ್ಳಿಗಳಲ್ಲಿ ಕೆಲವೆಡೆ ನೆಟ್ವರ್ಕ್ ಸಮಸ್ಯೆ ತುಂಬಾ ವರ್ಷದಿಂದ ಇದ್ದು, ಸರ್ಕಾರ ಪರಿಹರಿಸಲಾಗದ ಸಮಸ್ಯೆಯಾಗಿಯೇ ಉಳಿದಿದೆ.ಈ ವೇಳೆ ಮಲೆನಾಡಿನಲ್ಲಿ ವಿಪರೀತ ಮಳೆಗೆ ರೈತರು ಕಂಗಾಲಾಗಿದ್ದಾರೆ.ಅಲ್ಲಲ್ಲಿ ಅಡಿಕೆ ಕೊಳೆ ರೋಗ ಉಲ್ಬಣಗೊಂಡಿದ್ದು ರೈತರ ಸಂಕಷ್ಟಕ್ಕೆ ಕಾರಣವಾಗಿದೆ.ಉತ್ತಮ ಸೇವೆ ನೀಡುತಿದ್ದ ಏರ್ಟೆಲ್ ನೆಟ್ವರ್ಕ್ ಇದೀಗ ಕಳಪೆ ಮಟ್ಟದ ಪ್ರದರ್ಶನ ತೋರಿದ್ದು ಗ್ರಾಹಕರು ಏರ್ಟೆಲ್ ನೆಟ್ವರ್ಕ್ ತೊರೆಯಲು ನಿರ್ಧರಿಸಿದ್ದು ಬೇರೆಡೆಗೆ ಪೋರ್ಟ್ ಮಾಡಿಸಿಕೊಳ್ಳುವ ಯೋಚನೆ ಮಾಡುತ್ತಿದ್ದಾರೆ. ಹಲವಾರು ಬಾರಿ ಸತ್ಯಶೋಧ ಮಾಧ್ಯಮ ಈ ಬಗ್ಗೆ ಎಚ್ಚರಿಸಿದ್ದು ಮಲೆನಾಡಿನಲ್ಲಿ ನೆಟ್ವರ್ಕ್ ಸಮಸ್ಯೆ ಜ್ವಲಂತ ಸಮಸ್ಯೆಯಾಗಿಯೇ ಉಳಿದು ಬಿಟ್ಟಿದೆ.ಇನ್ನಾದರೂ ನೆಟ್ವರ್ಕ್ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂಬುದು ಈ ವರದಿಯ ಉದ್ದೇಶವಾಗಿದೆ. ಸಂಪೂರ್ಣ ನೆಟ್ವರ್ಕ್ ಸಮಸ್ಯೆ ಇರುವ ಪ್ರದೇಶಗಳು ಹಲವಾರು ವರ್ಷಗಳಿಂದ ನೆಟ್ವರ್ಕ್ ಸಮಸ್ಯೆ ಎದುರಿಸುತ್ತಿರುವ ಮಲೆನಾಡಿನ ಪ್ರದೇಶಗಳೆಂದರೆ, ತೀರ್ಥಹಳ್ಳಿ ತಾಲೂಕಿನ ನಾಲೂರು ಗ್ರಾಮ ಪಂ ಇಳಿಮನೆ, ಕೊರನ ಕೋಟೆ,ಹುರುಳಿ. ಅರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡುಬೈಲು, ಕೇಳೂರು, ಬಾಗೋಡು, ಹಣಗೆರೆ ಗ್ರಾಮ ಪಂ ವ್ಯಾಪ್ತಿಯ ಹಣಗೆರೆ, ಕಳ್ಳಿಗದ್ದೆ, ಕನ್ನಂಗಿ.ಮತ್ತು ಹೊನ್ನೇತಾಳು ಗ್ರಾಂ ಪಂ ವ್ಯಾಪ್ತಿಯ ಶಿರೂರು ಮತ್ತು ಪಡುವಳ್ಳಿ ಗ್ರಾಮಗಳು ನೆಟ್ವರ್ಕ್ ಇಲ್ಲದೆ ಬದುಕುತ್ತಿದ್ದಾರೆ.ಒಂದು ತಿಂಗಳಿಂದ ಏರ್ಟೆಲ್ ಸಮಸ್ಯೆ ಎಲ್ಲೆಲ್ಲಿ ತೀರ್ಥಹಳ್ಳಿ ತಾಲೂಕಿನ ಹೊಸಪೇಟೆ -ಚಂಗಾರು, ಜಾವಗಲ್, ಶಿರೂರು, ಕೆಂದಾಲಬೈಲ್ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿಪರೀತ ಏರ್ಟೆಲ್ ನೆಟ್ವರ್ಕ್ ಸಮಸ್ಯೆ ಕಾಣ ತೊಡಗಿದೆ. ಗ್ರಾಹಕರು ಏರ್ಟೆಲ್ ಕಂಪನಿಗೆ ಸ್ವತಃ ಕರೆ ಮಾಡಿದರು ಉತ್ತರ ಸಿಗದಂತಾಗಿದೆ.









