
ತೀರ್ಥಹಳ್ಳಿ : ತಾಲೂಕಿನ ಮೇಗರವಳ್ಳಿ ಫಾರೆಸ್ಟ್ ಆಫೀಸ್ ಬಳಿ ಬೈಕ್ ನಲ್ಲಿ ಚಲಿಸುತ್ತಿದ್ದ ವೇಳೆ ಮರದ ಹರೆಯೊಂದು ತುಂಡಾಗಿ ಬಿದ್ದ ಪರಿಣಾಮ ಓರ್ವರಿಗೆ ಗಂಭೀರ ಗಾಯವಾಗಿದ್ದು ಇನ್ನೊಬ್ಬರಿಗೆ ಕಾಲು ಮೂಳೆ ಮುರಿದು ಹೋಗಿದೆ ಜೊತೆಗೆ ಕೈ ಮೂಳೆ ಮುರಿದಿದೆ.

ಮೋಟಾರ್ ಮೆಕ್ಯನಿಕ್ ನವರು ಸೇಫ್ ಆಗಿದ್ದಾರೆ. ಮರ ಬಿದ್ದ ಹಿನ್ನಲೆ ಬೈಕ್ ಕೂಡ ಸಂಪೂರ್ಣ ಜಖಂ ಆಗಿದೆ ಸದ್ಯ ಗಾಯಳುಗಳನ್ನು ತೀರ್ಥಹಳ್ಳಿಯ ಜೆ ಸಿ ಆಸ್ಪತ್ರೆಗೆ ದಾಖಳಿಸಲಾಗಿದೆ.

ಈ ಘಟನೆ ಹಿನ್ನಲೆಯಲ್ಲಿ ಮೇಗರವಳ್ಳಿ ಅರಣ್ಯ ಇಲಾಖೆಯದ್ದೇ ತಪ್ಪಿದೆ ಇಂತಹ ಮರಗಳಿಂದ ಅನಾಹುತ ತಪ್ಪಿದ್ದಲ್ಲ ಜೊತೆಗೆ ಗಾಯಳುಗಳ ಚಿಕಿತ್ಸೆಗೆ ಪರಿಹಾರವನ್ನು ಅರಣ್ಯ ಇಲಾಖೆಯೇ ಭರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ

