
ಮಾರಶೆಟ್ಟಿಹಳ್ಳಿ: ಮಾರಶೆಟ್ಟಿ ಹಳ್ಳಿಯ ಗ್ರಾಮ ಪಂಚಾಯಿತಿಯಲ್ಲಿ ಕಿರಣ್ ಮೋರೆ ಅಧ್ಯಕ್ಷತೆ ಯಲ್ಲಿ ಪರಿಸರ ದಿನಾಚರಣೆಯನ್ನು ಸಸಿ ನಡುವುದರ ಮೂಲಕ ಪರಿಸರ ದಿನಾಚರಣೆಯನ್ನು ಜಾಗೃತಿ ಮಾಡಿದರು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಕಿರಣ್ ಮೋರೆ, ಉಪಾಧ್ಯಕ್ಷರು ಮಂಜುಳಾ, , ಲಲಿತಾಮ್ಮ, ಸುನಿತಾ, ನಿರ್ಮಲ, ಒಬ್ಬಳಮ್ಮ,ಶಾಲಿನಿ ಭದ್ರಯ, ಬಸವರಾಜ್ಜಪ್ಪ pdo ಸುರೇಶ್ ಕಾರ್ಯದರ್ಶಿ ನಟರಾಜ್ ಮತ್ತು ಪಂಚಾಕ್ಷರಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನುದ್ದೆಶಿಸಿ ಮಾರಶೆಟ್ಟಿ ಹಳ್ಳಿಯ

ಅಧ್ಯಕ್ಷರಾದ ಯುವರತ್ನ ಕಿರಣ್ ಮೊರೆ ರವರು ಈಗಿನ ಯುವ ಪೀಳಿಗೆಯು ಮೊಬೈಲ್, ಅಂತರ್ಜಾಲದಲ್ಲಿ ತಮ್ಮ ಸಮಯವನ್ನು ಮೀಸಲಿಡುತ್ತಾರೆ ಕ್ರೀಡೆ, ಪರಿಸರ ಸ್ವಚ್ಛತೆ, ನಮ್ಮ ಸುತ್ತಮುತ್ತಲಿನ ಸ್ವಚ್ಛತೆ ಇದರ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಬೇಕು ಮುಂದಿನ ಪೀಳಿಗೆಗೆ ಉತ್ತಮ

ಪರಿಸರವನ್ನು ನೀಡಿ, ಯುವ ಪೀಳಿಗೆಗೆ ಮಾದರಿಯಾಗಿರಬೇಕು ಎಂದು ನುಡಿದರು. ಪ್ರತಿಯೊಬ್ಬರೂ ಒಂದೊಂದು ಸಸಿಯನ್ನು ನೀಡುವುದರ ಮೂಲಕ ನಮ್ಮ ಉತ್ತಮ ಪರಿಸರ ಬೆಳವಣಿಗೆಗೆ ನಾವು ಶ್ರಮಿಸಬೇಕು ಇತರರಿಗೆ ನಾವು ಮಾದರಿಯಾಗಿರಬೇಕು ಎಂದು ತಿಳಿಸಿದರು.
