
ತೀರ್ಥಹಳ್ಳಿ : ಜಿಲ್ಲಾ ಪೊಲೀಸ್ ಅಧೀಕ್ಷಕರ ನಿರ್ದೇಶನದಂತೆ ದಿನಾಂಕ 08.06.2025 ರಂದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕ್ ಸಾಲ್ಗಡಿ ಗ್ರಾಮ ಸಿರಿಗಣೆ ಯಲ್ಲಿ ಎಸ್ಸಿ ಎಸ್ಟಿ ಕುಂದುಕೊರತೆ ಸಭೆಯನ್ನು ತೀರ್ಥಹಳ್ಳಿ ಪೊಲೀಸ್ ಸಬ್ ಇನ್ಸಪೆಕ್ಟರ್.ಸುಷ್ಮಾ ಆರ್ ಇವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.

,ದಲಿತರು ಗ್ರಾಮಸ್ಥರು ಎದುರಿಸುತ್ತಿವರ ಸಮಸ್ಯೆಗಳ ಬಗ್ಗೆ ಚರ್ಚಿಸಿ.ದಲಿತರ ಆಗ್ರಹದಂತೆ ಬಗರ್ ಹುಕುಂ ಮಂಜೂರಾತಿ ಸೇರಿದಂತೆ ಇತರ ಆರ್ಥಿಕ ವ್ಯವಸ್ಥೆ ಹಾಗು ಸರ್ಕಾರಿ ಸವಲತ್ತು ಗಳ ಬಗ್ಗೆ ತಹಶೀಲ್ದಾರ್ ಹಾಗು ಸಂಬಂಧ ಪಟ್ಟ ಇಲಾಖೆಗಳಿಗೆ ತಿಳಿಸುವುದಾಗಿ ಭರವಸೆ ನೀಡಿದರು.ಅಲ್ಲದೆ ಯಾರಿಂದಲಾದರೂ ಕಿರುಕುಳ ಬಂದರೆ ಯಾರ ಶಿಫಾರಸು ಇಲ್ಲದೆ ನೇರವಾಗಿ ದೂರು ದಾಖಲಿಸುವಂತೆ ದಲಿತರ ಧೈರ್ಯ ತುಂಬಿದರು.
ಹಾಗು ತುರ್ತು ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆಯನ್ನು ಗ್ರಾಮಸ್ಥರಲ್ಲಿ ಹಂಚಿ ಕೊಂಡರು. ಸಭೆಯಲ್ಲಿ ಕಾನ್ಸ್ಟೇಬಲ್ ಗಳಾದ ಪರಮೇಶ್ ನಾಯಕ್ . ಪ್ರದೀಪ್ ಸುರೇಶ್ ನಾಯಕ್ ದಲಿತ ಮುಖಂಡರಾದ ನಾಗಪ್ಪ ಎಸ್ ಎಂ . ಸಿರಿಗಣೆ ಭಾಸ್ಕರ್ . ಸಾಲ್ಗಡಿ ಪಂಚಾಯತಿ ಉಪಾಧ್ಯಕ್ಷರಾದ ಶಕುಂತಲಾ ಈಶ್ವರ್ ಹಾಗು ಕೀಗಡಿ ಕೃಷ್ಣ ಮೂರ್ತಿ ಭಾಗವಹಿಸಿದ್ದರು.