
ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಧಾರ್ಮಿಕ ಕ್ಷೇತ್ರವೆಂದೆ ಹೆಸರು ಪಡೆದ ಹಣಗೆರೆ ಕಟ್ಟೆಯಲ್ಲಿ ಮಳೆಗಾಲದಲ್ಲಿ ಜಲಜೀವನ್ ಗಾಗಿ ರಸ್ತೆ ಪಕ್ಕದಲ್ಲಿ ಅಲ್ಲಲ್ಲಿ ಹೊಂಡ ಗುಂಡಿ ತೆಗೆದು ವಾಹನ ಸಂಚಾರ ಮಾಡಲು ಕಿರಿಕಿರಿ ಉಂಟಾಗಿದೆ.

ಈ ಬಗ್ಗೆ ಶಾಸಕರು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು, ಜನಪ್ರತಿನಿದಿಗಳು ಗಮನ ಹರಿಸಬೇಕಿದೆ.ಇದೆ ವೇಳೆ ಹಣಗೆರೆ ಕಟ್ಟೆಯ ಕುಣಜೆ ಬಳಿ ಶಾಲಾ ವಾಹನ ಹೊಂಡದಲ್ಲಿ ಸಿಕ್ಕಿಹಾಕಿ ಕೊಂಡಿದ್ದು ಹೊಂಡದಿಂದ ಮೇಲೇತ್ತಲು ಹರಸಾಹಸ ಪಡಬೇಕಾಯಿತು.

ಶಾಲಾ ವಾಹನದಲ್ಲಿ ವಿದ್ಯಾರ್ಥಿಗಳಿರುವುದರಿಂದ ಚಾಲಕರು ಕೊಂಚ ಜಾಗ್ರತೆ ವಹಿಸುವುದು ಅಗತ್ಯ ಇದು ಸತ್ಯಶೋಧ ಮಾಧ್ಯಮದ ಕಳಕಳಿಯೂ ಹೌದು.

