Oplus_131072

ಸಂಪೂರ್ಣ ಜಖಂ ಅಗೋದ್ರೊಳಗೆ ಶಾಸಕರೇ ಇತ್ತ ಗಮನ ಹರಿಸಿ – ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಪೋಷಕರ ಅಕ್ರೋಶ

ತೀರ್ಥಹಳ್ಳಿ : ತಾಲೂಕಿನ ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾರ್ಡರ ಗದ್ದೆ ತೆಮ್ಮೆ ಮನೆ ಶಾಲೆಯು ಸು 70 ವರ್ಷ ಇತಿಹಾಸ ಹೊಂದಿದ್ದ ಶಾಲೆಯಾಗಿದ್ದು, ಶಾಲೆಯಲ್ಲಿ 30ಕ್ಕೂ ಹೆಚ್ಚು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಇನ್ನು ಮಲೆನಾಡಿನ ಭಾಗದಲ್ಲಿ 3 4 ದಿನಗಳ ಹಿಂದೆ ಆರಿದ್ರಾ ಮಳೆ ಹಾಗೂ ಜೋರಾದ ಗಾಳಿಗೆ ಕಟ್ಟಡ ಕುಸಿದಿದ್ದು,ಕಟ್ಟಡ ಒಳಭಾಗದಲ್ಲಿ ಗೋಡೆಗಳು ಬಿರುಕು ಬಿಟ್ಟು, ಅಲ್ಲಲ್ಲಿ ಇಟ್ಟಿಗೆ ಸಮೇತ ಪುಡಿ ಪುಡಿಯಾಗಿ ಬಿದ್ದಿದೆ.

ಹಳೆಯ ಅಕ್ಷರ ದಾಸೋಹ ಕೊಠಡಿ ಸಂಪೂರ್ಣ ಬಿರುಕು ಬಿಟ್ಟು ಇನ್ನೇನು ಬೀಳುವ ಸ್ಥಿತಿಯಲ್ಲಿದೆ.ಹಾಗೊಂದು ವೇಳೆ ಬಿದ್ದರೆ ಕೆಳಗಡೆ ಇರುವ ಅಂಗನವಾಡಿಗೆ ಹನಿಯಾಗಲಿದ್ದು ದೊಡ್ಡ ಅಪಾಯ ಕಾದಿದಂತೂ ನಿಜಾ. ಈ ಬಗ್ಗೆ ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ ರವರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಹಿತಿ ಪಡೆದು

ಶಾಲೆಯ ಉಳಿವಿಗೆ ಸೂಕ್ತ ಕ್ರಮ ಜರುಗಿಸುವುದು ಅಗತ್ಯವಾಗಿದೆ.ಈ ಬಗ್ಗೆ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಗಿರೀಶ್ ಗೌಡ ತೈರೋಳ್ಳಿ ಹಾಗೂ ಮುಖ್ಯ ಶಿಕ್ಷಕರಾದ ಪ್ರಭಾಕರ್ ಇವರು ನಾಲೂರು ಗ್ರಾಮ ಪಂಚಾಯಿತಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಿ ಆರ್ ಪಿ

ಯವರ ಗಮನಕ್ಕೆ ತಂದಿದ್ದು ಮುಂದಿನ ಕ್ರಮದ ಬಗ್ಗೆ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.ಇದೇ ವೇಳೆ ಶಾಲೆ ಸರಿಪಡಿಸಿಕೊಡುವಂತೆ ಶಿಕ್ಷಣ ಸಚಿವರಿಗೆ ತೆಮ್ಮೆ ಮನೆ ಶಾಲೆಯ ಮಕ್ಕಳು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *