

ತೀರ್ಥಹಳ್ಳಿ : ತಾಲೂಕಿನ ಆಗುಂಬೆಯ ಘಾಟಿ ತಿರುವು 6 ರಲ್ಲಿ ಮುಂಡರಗಿ ಯಿಂದ ಮಂಗಳೂರಿಗೆ ಹೊರಟ ಪಿಕಪ್ ಚಾಲಕನ ಹಿಡಿತಕ್ಕೆ ಸಿಗದೇ ಜೊತೆಗೆ ರಕ್ಷಣಾ ತಡೆಗೋಡೆ ಇಲ್ಲದೆ 60ಅಡಿ ಕಂದಕಕ್ಕೆ ಬಿದ್ದಿದೆ. ಈ ಅನಾಹುತ ಸೆ. 27ರ ಸಂಜೆ 6 ಗಂಟೆ ಸುಮಾರು ನಡೆದಿದ್ದು ವಾಹನ ಸಂಚರಿಸದೆ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಹೈರಾಣಾದರು.

ಪಿಕಪ್ ನಲ್ಲಿದ್ದ ಡ್ರೈವರ್ ಅಪಾಯದ ಮುನ್ಸೂಚನೆ ತಿಳಿದು ಪಿಕಪ್ ನಿಂದ ಹಾರಿ ಪ್ರಾಣ ಉಳಿಸಿಕೊಂಡಿದ್ದು, ಪ್ರಕರಣ ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇನ್ನ್ಯಾವತ್ತು National highway authorities ನವರು ತಡೆಗೋಡೆ ವಿಸ್ತರಿಸಲು ಹಾಗೆ ಎತ್ತರವಾದ ತಡೆಗೋಡೆ ಕಟ್ಟುವ ಬಗ್ಗೆ ಕೊಂಚ ಗಮನ ಹರಿಸಲು ಸಾರ್ವಜನಿಕರು ಮನವಿ ಮಾಡಿದ್ದಾರೆ.



