– ಇದು ಎಚ್ಚರಿಕೆಯು ಹೌದು!

ಇತ್ತೀಚೆಗೆ ನೀಡಿರುವ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ, ಏರ್ಟೆಲ್, ರಿಲಯನ್ಸ್ ಜಿಯೋ ಮತ್ತು ವೊಡಾಫೋನ್ ಐಡಿಯಾದಂತಹ ಮೊಬೈಲ್ ಸೇವಾ ಪೂರೈಕೆದಾರರು ನಿರ್ದಿಷ್ಟ ಅವಧಿಯ ನಂತರ ನಿಷ್ಕ್ರಿಯಗೊಂಡ ಸಂಖ್ಯೆಯನ್ನು ಹೊಸ ಚಂದಾದಾರರಿಗೆ ಮರುಹಂಚಿಕೆ ಮಾಡಲು ಅನುಮತಿಸಲಾಗಿದೆ ಎಂದು ಸುಪ್ರೀಂ ಹೇಳಿದೆ.ಈ ನಿರ್ಧಾರವು ವಾಟ್ಸಾಪ್ ಬಳಕೆದಾರರ ಮೇಲೆ ಪರಿಣಾಮ ಬೀರುತ್ತದೆ. ಏಕೆಂದರೆ ಸಂದೇಶ ಕಳುಹಿಸುವ ವೇದಿಕೆಯು ಬಳಕೆದಾರರ ಮೊಬೈಲ್ ಸಂಖ್ಯೆಗೆ ಲಿಂಕ್ ಆಗಿರುತ್ತದೆ. ಆದ್ದರಿಂದ, ಯಾವುದೇ ಸಂಭಾವ್ಯ ಗೌಪ್ಯತೆ ಉಲ್ಲಂಘನೆಯನ್ನು ತಡೆಗಟ್ಟಲು ವಾಟ್ಸಾಪ್ ಬಳಕೆದಾರರು ತಮ್ಮ ಫೋನ್ ಸಂಖ್ಯೆಯನ್ನು ಬದಲಾಯಿಸುವ ಮೊದಲು ತಮ್ಮ ಡೇಟಾವನ್ನು ಅಳಿಸುವ ಪ್ರಾಮುಖ್ಯತೆಯನ್ನು ನ್ಯಾಯಾಲಯವು ಒತ್ತಿಹೇಳಿದೆ.