🏅 ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ರಿಂದ ಹಾಸ್ತಾಂತರ ಯಾರ್ಯಾರಿಗೆ ಬಂತು ಪ್ರಶಸ್ತಿ❓

𝗦𝗔𝗧𝗛𝗬𝗔𝗦𝗛𝗢𝗗𝗛𝗔 𝗡𝗘𝗪𝗦 𝗗𝗘𝗦𝗞 :ಸಾಮಾಜಿಕ, ವಿಜ್ಞಾನ, ಆವಿಷ್ಕಾರ, ಸಂಸ್ಕೃತಿ, ಆರೋಗ್ಯ, ಕ್ರೀಡೆ ಹೀಗೆ ವಿವಿಧ ವಿಭಾಗಗಳ 25 ವ್ಯಕ್ತಿಗಳಿಗೆ ಚಾಂಪಿಯನ್ಸ್ ಆಫ್ ಚೇಂಜ್ ಕರ್ನಾಟಕ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿ ಸ್ವೀಕರಿಸಿದ ಪ್ರಮುಖರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ ವಿ ವೀರೇಂದ್ರ ಹೆಗಡೆ.ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ವಿಜ್ಞಾನಿ ಸಿ.ಎನ್.ಆರ್.ರಾವ್, ರಂಗಭೂಮಿ ಕಲಾವಿದೆ ಮತ್ತು ಗಾಯಕಿ ಮಂಜಮ್ಮ ಜೋಗತಿ, ಪರಿಸರವಾದಿ ತುಳಸಿ ಗೌಡ, ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್, ಕನ್ನಡ ಚಲನಚಿತ್ರ ನಟರು ಮತ್ತು ನಿರ್ದೇಶಕರು ರವಿಚಂದ್ರನ್ ಮತ್ತು ಉಪೇಂದ್ರ ಸೇರಿದ್ದರು. ದಿವಂಗತ ನಟ ವಿಷ್ಣುವರ್ಧನ್ ಅವರಿಗೂ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಯಿತು.

ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಪ್ರಶಸ್ತಿ ವಿತರಿಸಿದರು ಹಾಗೂ “ಉತ್ತಮ ಸಮಾಜಕ್ಕಾಗಿ ನಾಗರಿಕರು ನಿಸ್ವಾರ್ಥ ಸೇವೆಯನ್ನು ನೀಡಬೇಕು ಎಂದು ಕರೆ ಕೊಟ್ಟರು”