
ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬರು ತನ್ನ ಮೊಬೈಲ್ ಕಳೆದುಕೊಂಡ ಬಗ್ಗೆ ದೂರು ದಾಖಲಿಸಿದ್ದ ಹಿನ್ನಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಡುಕಾಟ ನಡೆಸಿ ಕೊನೆಗೆ ಕಡ್ತುರ್ ಆರಿಫ್ ಅವರ ಸು 20000ಸಾವಿರದ ವಿವೊ ಮೊಬೈಲ್ ಅನ್ನು ಕೊಪ್ಪದಲ್ಲಿ ಪತ್ತೆ ಹಚ್ಚಿ ಮೊಬೈಲ್ ಅನ್ನು ವಾರಸುದಾರರಾದ

ಕಡ್ತುರ್ ಆರಿಫ್ ಅವರಿಗೆ ಪಿ ಎಸ್ ಐ ಶಿವನ ಗೌಡ ಪಾಟೀಲ್ ಹಸ್ತಾಂತರಿಸಿದರು.ಮೊಬೈಲ್ ಕಳೆದುಕೊಂಡವರು CEIR portal ಗೆ ಮೂಲಕ ಮೊಬೈಲ್ ನ ಮಾಹಿತಿ ಹಾಗೂ ಐ ಎಂ ಈ ಐ ನಂಬರ್ ಮಾಹಿತಿ ಹಾಕಿದ್ದಲ್ಲಿ ಅದು ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ತಲುಪಿ ಅದರ ಬಗ್ಗೆ ದೂರು ದಾಖಲಾಗಿ ಕದ್ದವರ ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ಸಹಕರಿಸುವರು. ಇದು ಸಾರ್ವಜನಿಕರಿಗಾಗಿ ಪ್ರಕಟಣೆಯದ್ದರಿಂದ ನೀವೆಲ್ಲರೂ ಸದುಪಯೋಗಪಡಿಸಿಕೊಳ್ಳಲಿ ಎಂಬುದು ನಮ್ಮ ಆಶಯ.


