ತೀರ್ಥಹಳ್ಳಿ :ತಾಲೂಕಿನ ಆಗುಂಬೆ ಹೋಬಳಿ ಹೊನ್ನೇತಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ನಿ.ಕೆಂದಾಳ ಬೈಲಿನಲ್ಲಿ ದಿ 20ರ ಶುಕ್ರವಾರ ರಂದು 2023 -24ನೇ ಸಾಲಿನ ಸರ್ವಸದಸ್ಯರ ಮಹಾಸಭೆ ಯಶಸ್ವಿಯಾಗಿ ನೆರವೇರಿತು.ಈ ಕಾರ್ಯಕ್ರಮ ನಾಬಳ ಶಚಿಂದ್ರ ಹೆಗ್ಡೆಯವರ ಘನ ಅಧ್ಯಕ್ಷತೆಯಲ್ಲಿ ನಡೆಯಿತು.ಹೊನ್ನೇತಾಳು ಶಾಲೆಯ ಮಕ್ಕಳು ಪ್ರಾರ್ಥನೆ ಮಾಡಿದರು ಜೊತೆಗೆ ರೈತ ಗೀತೆ ಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವೇದಿಕೆಯಲ್ಲಿದ್ದ ಗಣ್ಯರು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಹಾಗೆಯೇ ನಿಧನ ಹೊಂದಿದ್ದ ಸಂಘದ ರೈತ ಸದಸ್ಯರಿಗೆ ಮೌನಾಚರಣೆ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು. ನಂತರ ವಾರ್ಷಿಕ ಸಾಮಾನ್ಯ ಸಭೆಯ ಅಹ್ವಾನ ಪತ್ರಿಕೆ ಓದಿ ದಾಖಲು ಮಾಡಲಾಯಿತು.ಜೊತೆಗೆ 2023 -24 ನೇ ಸಾಲಿನ ಲೆಕ್ಕ ಪರಿಶೋಧನೆಯಾದ ಜಮಾ -ಖರ್ಚು, ವ್ಯಾಪಾರ ತಃಖ್ತೆ ಮತ್ತು ಆಸ್ತಿ ಜವಾಬ್ದಾರಿ ತಃಖ್ತೆ ಓದಿ ಸದಸ್ಯರ ಜೊತೆಗೆ ಚರ್ಚಿಸಿ ಮಾಹಿತಿ ಪಡೆದು ಮುಂದಿನ ದಿನಗಳಲ್ಲಿ ಅದನ್ನು ಕಾರ್ಯರೂಪಕ್ಕೆ ತರಲು ಭರವಸೆ ನೀಡಲಾಯಿತು.ಕಾರ್ಯಕ್ರಮದ ವರದಿಯನ್ನು ಮುಖ್ಯಕಾರ್ಯನಿರ್ವಾಹಕರಾದ ವಿನಾಯಕ್ ಸಿ ನಡೆಸಿಕೊಟ್ಟರು.

ಇದಕ್ಕೆ ಸಹಕಾರ ನೀಡಿದ ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡರು, ಮಾಜಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಸಹ್ಯಾದ್ರಿ ಅ. ಬೆ. ಮಾ. ಸ ಸಂಘದ ಅಧ್ಯಕ್ಷರಾದ ವಿಜಯ್ ದೇವ್ ಇವರಿಗೆ ಸಂಘವು ಧನ್ಯವಾದ ತಿಳಿಸಿದೆ.

ಈ ವೇಳೆ ನೂತನ ಅಧ್ಯಕ್ಷರಾದ ನಾಬಳ ಶಚಿಂದ್ರ ಹೆಗ್ಡೆಯವರಿಗೆ ಉಪಾಧ್ಯಕ್ಷರು ಹಾಗೂ ನಿರ್ದೇಶಕರು ಸನ್ಮಾನಿಸಿದರು.ಅಧ್ಯಕ್ಷರಾದ ನಾಬಳ ಶಚಿಂದ್ರ ಹೆಗ್ಡೆ ಕಾರ್ಯಕ್ರಮ ಉದ್ದೇಸಿಸಿ ಮಾತನಾಡಿ ” ಈ ಸಹಕಾರ ಸಂಘವು ಕೇವಲ ಆಡಳಿತ ಮಂಡಳಿಯಿಂದ ಸಾಧ್ಯವಾಗುವುದಿಲ್ಲ ಇದು ನಿಮ್ಮೆಲ್ಲರ ಸಹಕಾರದಿಂದ ಮಾತ್ರ ಸಾಧ್ಯ ಎಂದರು.ಆರ್ ಟಿ ಸಿ ಹೊಂದಿದ್ದ ಎಲ್ಲರಿಗೂ 8 ದಿನಗಳಲ್ಲಿ ಕೃಷಿ ಸಾಲ ಸಿಗಲಿದೆ.ಹಾಗೆಯೇ ಮಹಾಸಭೆಯಲ್ಲಿ ಚರ್ಚಿಸಲಾದ ವಿಷಯವಾದ ರೈತರಿಗೆ ಅಗತ್ಯವಿರುವ ಔಷಧ,ಕ್ರಿಮಿನಾಶಕ, ಕೀಟನಾಶಕಗಳನ್ನು ಕೊಡಲು ತೀರ್ಮಾನಿಸಿದ್ದು ಮುಂದಿನ ದಿನಗಳಲ್ಲಿ ನೀಡುತ್ತೇವೆ ಎಂದರು.ಜೊತೆಗೆ ನಿಮ್ಮೆಲ್ಲರ ಮಾರ್ಗದರ್ಶನ ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ವಿನಯ್,ನಿರ್ದೇಶಕರಾದ ರವೀಶ ಸುಳುಗೋಡು,ಹೆಚ್.ಆರ್ ಮಹಬಲೇಶ ಹಸಿರುಮನೆ, ಹೆಚ್ ಕೆ. ಗಿರೀಶ್ ಹೆಗ್ಡೆ, ಎಂ ವಿ ರತ್ನಾಕರ ಅಣುಗೋಡು, ಹೆಚ್ ಎಸ್ ಧರ್ಮಪ್ಪ ಹೊಸೂರು, ಕೆ ಎ ಕೃಷ್ಣಮೂರ್ತಿ ಕುಂದಾದ್ರಿ, ಶ್ರೀಧರ ದೋಣಿ ಹಕ್ಕಲು, ಶ್ರೀಮತಿ ಲಕ್ಷ್ಮಿ ದೇವಿ ಹಳ್ಳಿ ಬಿದರಗೋಡು,ಶ್ರೀಮತಿ ಕೆ ಸುಜಯ ಪಡುವಳ್ಳಿ,ಶಿವಕುಮಾರ್ ಕ್ಷೇತ್ರಧಿಕಾರಿಗಳು ಡಿಸಿಸಿ ಬ್ಯಾಂಕ್ ತೀರ್ಥಹಳ್ಳಿ ಶಾಖೆ ಜೊತೆಗೆ ಸಿಬ್ಬಂದಿ ವರ್ಗದವರಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಾಯಕ್ ಸಿ, ಹಂಗಾಮಿ ನೌಕರರಾದ ಶ್ರೀಮತಿ ಪ್ರತಿಮಾ ಕೆ, ವಿನಯ್ ಬಿ ಎಂ, ಕು ಅನುಶ್ರೀ ಹೆಚ್ ಎ, ಸಂದೇಶ್, ರಾಜೇಂದ್ರ ಜೊತೆಗೆ ಸಂಘದ ಸದಸ್ಯರು, ಗ್ರಾಮಸ್ಥರು, ಆಗುಂಬೆ, ಬಿದರಗೋಡು, ಹೊನ್ನೇತಾಳು ಗ್ರಾಂ ಪಂ ಅಧ್ಯಕ್ಷರು ಸದಸ್ಯರು ಇದ್ದರು ಕು ಅನುಶ್ರೀ ಇವರ ನಿರೂಪಣೆ ಜೊತೆಗೆ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಯವಾಯಿತು.

Leave a Reply

Your email address will not be published. Required fields are marked *