- ಶಿವಮೊಗ್ಗ ಜಿಲ್ಲೆಯ ಅರಳಸುರುಳಿಯಲ್ಲಿ ಘಟನೆ

ಶಿವಮೊಗ್ಗ :ರೈತ ರಾಘವೇಂದ್ರ(56) ಸಾಲಬಾಧೆಯಿಂದ ವಿಷ ಸೇವನೆ ಮಾಡಿ ಮೃತಪಟ್ಟ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಅರಳಸುರುಳಿಯ ಶಂಕ್ರಾಪುರ ಗ್ರಾಮದಲ್ಲಿ ನಡೆದಿದೆ.ಅತಿಯಾದ ಮಳೆಯಾಗಿದ್ದು ಅಡಿಕೆ ಹಿಂಗಾರಗಳು ಉದುರಿ ಸರಿಯಾಗಿ ಬೆಳೆ ಬಾರದ ಕಾರಣ ರಾಘವೇಂದ್ರ ಅವರು ಮಕ್ಕಳಿಗೆ ಸಾಲದ ಹೊರೆ ಹೊರೆಸುತ್ತೇನೆಂದು ಮನನೊಂದು ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದು, ತಕ್ಷಣ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 08- 24ರ ಬೆಳಗ್ಗೆ 4:30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ಈ ಸಂಬಂಧ ಮೃತ ರಾಘವೇಂದ್ರ ಇವರ ಹಿರಿಯ ಮಗ ಭರತ್ ಅವರು ತೀರ್ಥಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


