
ತೀರ್ಥಹಳ್ಳಿ : ಆಗುಂಬೆ – ಹಾಗೂ ತೀರ್ಥಹಳ್ಳಿ ಗೆ ಹೋಗುವ ಮುಖ್ಯ ರಸ್ತೆಗೆ ಒಣಗಿದ ಮರದ ರೆಂಬೆಗಳು ತುಂಡಾಗಿ ಪ್ರಯಾಣಿಕರ ಜೀವ ತೆಗೆಯಲು ಕಾದು ಕುತಂತಿದೆ.ಈ ಬಗ್ಗೆ ಅರಣ್ಯ ಇಲಾಖೆ ಕೂಡ ಮುತುವರ್ಜಿ ವಹಿಸಿ ರಸ್ತೆ ಸಮೀಪದಲ್ಲಿ ಅಪಾಯಕಾರಿಯಾಗಿ ಮರಗಳನ್ನು ಹಾಗೂ ಒಣಗಿ ಮರಕ್ಕೆ ಜೋತು ಬಿದ್ದ ಮರದ ತುಂಡುಗಳನ್ನ ತೆರೆವುಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ಸತ್ಯಶೋಧ ಮಾಧ್ಯಮದ ಆಶಯ.ಮೇಗರವಳ್ಳಿಯಿಂದ ಕಲ್ಮನೆ ಮಾರ್ಗ ಮದ್ಯೆ ರಸ್ತೆಗೆ ಬೀಳುವಂತೆ ಜೋತು ಬಿದ್ದಿದ್ದು ಬೈಕು ಸವಾರರ ಪಾಲಿಗೆ ಕಂಟಕವಾಗಲಿದೆ.ನಿರ್ಲಕ್ಷ್ಯ ವಹಿಸಿ ಅವಘಡ ಸಂಭವಿಸಿದರೆ ಅದಕ್ಕೆ ನೇರ ಹೊಣೆ ಯಾರಾಗುತ್ತಾರೆ ಎಂಬುದು ಉತ್ತರ ಸಿಗದ ಪ್ರಶ್ನೆ ಯಾಗೆ ಉಳಿಯಲಿದೆ. ಇನ್ನು ಈ ಬಗ್ಗೆ ತೀರ್ಥಹಳ್ಳಿ ಶಾಸಕರು ಹಾಗೂ ಮಾಜಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ ರವರು ಅಧಿಕಾರಿಗಳಿಗೆ ತೆರವುಗೊಳಿಸಲು ಸುಚಿಸುವುದು ಅತ್ಯಗತ್ಯವಾಗಿದೆ.

