- ಹೊಸನಗರ ಪುರಪ್ಪೆಮನೆ ಗ್ರಾಂ ಪಂ ನಲ್ಲಿ ಘಟನೆ

ಹೊಸನಗರ ತಾಲೂಕು ಪುರಪ್ಪೆಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬೈಲ್ ಗ್ರಾಮದ ಮಿನಿ ಅಂಗನವಾಡಿಯಲ್ಲಿ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ತಾರಾಮತಿ ಎಂಬವರು ಆಗಸ್ಟ್ 22ರಂದು ಕರ್ತವ್ಯ ನಿರತರಾಗಿದ್ದಾಗ ನಾಲ್ಕು ಗಂಟೆ ಸುಮಾರಿಗೆ ನೀಲಿ ಬಣ್ಣದ ಜರ್ಕಿನ್ ಹಾಕಿಕೊಂಡು ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ಅಪರಿಚಿತ ವ್ಯಕ್ತಿ ಒಬ್ಬ ಅಂಗನವಾಡಿಗೆ ನುಗ್ಗಿ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಎಂಬವರಿಗೆ ಬೆದರಿಸಿ ಅವರ ಕೊರಳಲ್ಲಿದ್ದ 42 ಗ್ರಾಂ ತೂಕದ ಅಂದಾಜು 3 ಲಕ್ಷ .20 ಸಾವಿರರೂ ಬೆಳಬಾಳವ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವುದಾಗಿ ವರದಿಯಾಗಿದೆ ಈ ದರೋಡೆ ಪ್ರಕರಣದ ಬಗ್ಗೆ ಹೊಸನಗರ ಆರಕ್ಷಕ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖಾ ಕ್ರಮ ಕೈಗೊಂಡಿದ್ದಾರೆ.


