• ಬಿಡುಗಡೆಗೂ ಮುನ್ನ ಪಾಠಶಾಲಾ ಚಿತ್ರಕ್ಕೆ ಬಿತ್ತು ಸಿನಿ ರಸಿಕರ ಒಪ್ಪಿಗೆ ಮುದ್ರೆ

ಶಿವಮೊಗ್ಗ :ಎಂ ಎಸ್ ಸ್ಕ್ವಯರ್ ಬ್ಯಾನರ್ ಅಡಿಯಲ್ಲಿ ಮಲೆನಾಡ ಕಥಾ ಹಂದರವಿರುವ ಹೆದ್ದೂರು ಮಂಜುನಾಥ್ ಶೆಟ್ಟಿ ನಿರ್ದೇಶನದ ಮೂರನೆಯ ಚಲನಚಿತ್ರ ಪಾಠಶಾಲಾ ಚಿತ್ರದ ಚಿತ್ರೀಕರಣವು 60 ಭಾಗ ಮುಗಿದಿದ್ದು ಅದ್ಭುತವಾಗಿ ಮೂಡಿಬಂದಿದೆ ತೀರ್ಥಳ್ಳಿಯ ಮಕ್ಕಳ ಜೊತೆ ಚಲನಚಿತ್ರ ಕಲಾವಿದರುಗಳಾದ ಬಾಲಾಜಿ ಮನೋಹರ್, ಸುಧಾಕರ್ ಬನ್ನಂಜೆ, ಕಿರಣ್ ನಾಯಕ್ ,ನಟನಾ ಪ್ರಶಾಂತ್, ಕಾಮಿಡಿ ಕಿಲಾಡಿಗಳು ಖ್ಯಾತಿ ಗಜೇಂದ್ರ, ಕೇಶವ ಗುತ್ತಳ್ಳಿಕೆ.. ಸುನೈನಾ ಕಿರಣ್ ನೇಹಾ ಗೌಡ. ಸೌಮ್ಯ ಪೂರ್ಣೇಶ್, ಸುಧಾಕರ್ ಶೆಟ್ಟಿ ಹೊನ್ನೇಕೇರಿ ಮುಖ್ಯ ಪಾತ್ರದಲ್ಲಿದ್ದು ಹಾಗೂ ನುರಿತ ತಂತ್ರಜ್ಞಾನ ತಂಡ ಈ ಚಿತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಹಾಗೂ ಸಿನಿಮಾ ಸೀರಿಯಲ್ ಗಳಲ್ಲಿ ನಟಿಸಿದ ನಿರ್ದೇಶಕರಾದ ಹೆದ್ದೂರು ಮಂಜುನಾಥ್ ಶೆಟ್ಟಿ ಅವರು ಒಂದು ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಇಲ್ಲಿವರೆಗೆ ಸಿನಿಮಾ ಅತ್ಯುದ್ಬುತವಾಗಿ ಮೂಡಿಬಂದಿದ್ದು ಚಿತ್ರದ ಯಶಸ್ಸಿನ ಭರವಸೆಯಲ್ಲಿ ಚಿತ್ರತಂಡ ಮುಂದಿನ ಚಿತ್ರೀಕರಣದ ತಯಾರಿ ನಡೆಸುತ್ತಿದ್ದಾರೆ.

ಪ್ರೀತಿ ಮಂಜುನಾಥ್, ನಮ್ಮ ಮಕ್ಕಳು ಹಾಗೂ ನಮ್ಮ ತಂತ್ರಜ್ಞರ ತಂಡದ ಜೊತೆಗೆ ಸಹ ನಿರ್ಮಾಪಕರುಗಳಾದ ಪ್ರದೀಪ್ ಹೆಗ್ಗೋಡು, ರವಿ ಬಿ ಶೆಟ್ಟಿ ನಣಬೂರ್, ರವೀಶ್ ತೀರ್ಥಹಳ್ಳಿ, ಭಾಸ್ಕರ್ ಪೆಟ್ರೋಲ್ ಬಂಕ್, ಕುಮಾರ್ ಸಹ್ಯಾದ್ರಿ ಪಾಲಿಟೆಕ್ನಿಕ್, ಅರುಣ್ ಕುಮಾರ್ ಮಲ್ಲೇಸರ, ನವೀನ್ ವಿಜಯ್ ತೀರ್ಥಹಳ್ಳಿ, ವಿಶಾಲ್ ತೀರ್ಥಹಳ್ಳಿ, ಡಾಕ್ಟರ್ ಸುರೇಶ್ ಹೆಬ್ರಿ ಅವರ ಸಹಕಾರದೊಂದಿಗೆ ಈ ಸಿನಿಮಾ ಅದ್ಭುತವಾಗಿ ಮೂಡಿಬರಲು ಸಾಧ್ಯವಾಗಿದೆ ಇಡೀ ತಂಡ ಈ ಚಿತ್ರವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಶ್ರಮಿಸುತ್ತಿದ್ದೇವೆ ಇದಕ್ಕೆ ಸಹಕರಿಸಿದ ನಮ್ಮ ತಂಡಕ್ಕೂ ತೀರ್ಥಹಳ್ಳಿಯ ಜನತೆಗೆ ಧನ್ಯವಾದಗಳು ತಿಳಿಸುತ್ತಾ ನಿಮ್ಮೂರಿನ ಪ್ರತಿಭೆಗಳಿಗೆ ಸಹಕಾರ ನೀಡಿ ಪಾಠಶಾಲಾ ಚಿತ್ರದ ಮೂಲಕ ತೀರ್ಥಹಳ್ಳಿಯ ಹೆಸರನ್ನು ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ದಾಖಲಿಸಲು ಆಶೀರ್ವದಿಸಬೇಕಾಗಿ ಕೇಳಿಕೊಳ್ಳುತ್ತೇವೆ. ಸದ್ಯದಲ್ಲೇ ಚಿತ್ರದ ಟೀಸರ್ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ.

Leave a Reply

Your email address will not be published. Required fields are marked *