
ತೀರ್ಥಹಳ್ಳಿ :ವಾಹನವೊಂದನ್ನು ಕದ್ದು ಓಡಿಸಿಕೊಂಡು ಹೋದ ಕಳ್ಳರು ಅದರಲ್ಲಿದ್ದ 30 ಲಕ್ಷ ಹಣವನ್ನು ದರೋಡೆ ಮಾಡಿ ಖತರ್ನಾಕ್ ಕಳ್ಳರು ಪರಾರಿಯಾಗಿದ್ದಾರೆ.ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಗುಜರಿ ವಸ್ತು

ತರಲು ಮಂಗಳೂರಿಗೆ ಹೋಗುತ್ತಿದ್ದ ವಾಹನವನ್ನು ಕದ್ದೊಯ್ದಿದ್ದಾರೆ.ಈ ಸಂಬಂಧ ವಾಹನದ ಮಾಲೀಕ ತೀರ್ಥಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ತಮ್ಮ ವಾಹನದಲ್ಲಿ ಇದ್ದಂತ 30 ಲಕ್ಷ ಹಣವನ್ನು ಕಳ್ಳರು ಕದ್ದುಕೊಂಡು ಹೋಗಿದ್ದು ಹುಡುಕಿಸಿಕೊಡುವಂತೆ ಮನವಿ ಮಾಡಿದ್ದಾರೆ.



