- ಟೀಮ್ ಎ ಐ ಟಿ ಅಲ್ಯೂಮಿನಿ ಮತ್ತು ಲಯನ್ಸ್ ಕ್ಲಬ್ ಆಗುಂಬೆ ಸಹಬಾಗಿತ್ವ
- ಶಾಸಕ ಆರಗ ಜ್ಞಾನೇಂದ್ರ ಉಪಸ್ಥಿತಿ
- ಮಕ್ಕಳ ಬಗೆಗಿನ ಕಾಳಜಿಹೊತ್ತ ಹಸಿರುಮನೆ ನಂದನ್ ರಿಗೆ ಮೆಚ್ಚುಗೆ

ಆಯೋಜನೆಯಲ್ಲಿ 49 ಶಾಲೆಗಳ ಸುಮಾರು 2,050 ಶಾಲಾ ಮಕ್ಕಳಿಗೆ ಅಗತ್ಯ ಕಲಿಕಾ ಪರಿಕರ ನೀಡುವ ಕಾರ್ಯಕ್ರಮವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಡ್ಡೇಕೇರಿಯಲ್ಲಿ ದಿನಾಂಕ 2- 8- 2024 ರಂದು ನೆರವೇರಿತು. ಸ ಹಿ ಪ್ರಾಶಾಲೆ ಗುಡ್ಡೇಕೇರಿಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಎಚ್ ಆರ್ ಜಯಚಂದ್ರ ಅಧ್ಯಕ್ಷತೆಯಲ್ಲಿ ಮಾನ್ಯ ಶಾಸಕರು ಹಾಗೂ ಮಾಜಿ ಗೃಹಸಚಿವರಾದ ಶ್ರೀ ಆರಗ ಜ್ಞಾನೇಂದ್ರರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಿಜಿಐ ಕಂಪನಿಯ ಶ್ರೀ ಸುಧಾಕರ್, ಶ್ರೀ ರಾಜೇಶ್ ಮತ್ತು ಶ್ರೀ ಸುರೇಂದ್ರನ್ ಸುರಭಿ ಫೌಂಡೇಶನ್ ನ ಅಡಿವೆಪ್ಪ ಪಾಟೀಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಗಣೇಶ್ ವೈ, ಟೀಮ್ ಎ ಐ ಟಿ ಅಲ್ಯೂಮಿನಿಯ ಶ್ರೀ ಪುಷ್ಪಾನಂದ್, ಶ್ರೀ ಸಂದೀಪ್ ಮಂಗಳ ಮತ್ತು ಶ್ರೀ ಮಧು ಹಾಗೂ ಲಯನ್ಸ್ ಜೋನ್ ಚೇರ್ ಪರ್ಸನ್ ಶ್ರೀಮತಿ ವೀಣಾ ಗಿರೀಶ್, ಆಗುಂಬೆ ಗ್ರಾ ಪಂ ಅಧ್ಯಕ್ಷರಾದ ಶ್ರೀ ಜಯಪ್ರಕಾಶ್ ಭಟ್ ಉಪಾಧ್ಯಕ್ಷರಾದ ಶ್ರೀಮತಿ ಸರಸ್ವತಿ ಕೃಷ್ಣ, ಸದಸ್ಯರಾದ ಶ್ರೀಮತಿ ಶ್ವೇತಾ ಗಿರೀಶ್, ಶ್ರೀ ಶಶಾಂಕ್ ಹೆಗಡೆ , ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ಹೊಸಹಳ್ಳಿ ಸುಧಾಕರ್ , ಶ್ರೀ ಲಯನ್ ಮಂಜುನಾಥ್ ಆಚಾರ್, ಶ್ರೀ ಲಯನ್ ಸುಧೀಂದ್ರ ಮಲ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಲಯನ್ ಜಿಲ್ಲಾ 317ಸಿ ಫಸ್ಟ್ ಡಿಸ್ಟಿಕ್ ವೈಯ್ಸ್ ಗವರ್ನರ್ ಶ್ರೀಮತಿ ಸ್ವಪ್ನ ಸುರೇಶ್ ಶಾಲೆಗೆ ವಾಟರ್ ಫಿಲ್ಟರ್ ನೀಡಿರುವುದಕ್ಕೆ ವಿಶೇಷವಾಗಿ ಗೌರವಿಸಲಾಯಿತು.

49 ಶಾಲೆಗಳ 2050 ಶಾಲಾ ಮಕ್ಕಳಿಗೆ ಉಚಿತವಾಗಿ 400 ಬ್ಯಾಗ್ 8000 ನೋಟ್ ಬುಕ್, 1500 ಜಾಮಿಟ್ರಿ ಬಾಕ್ಸ್, 500 ರೈನ್ ಕೋರ್ಟ್ ನೀಡುವುದಲ್ಲದೆ, ಶಾಲೆಗಳಿಗೆ 3 ವಾಟರ್ ಫಿಲ್ಟರ್ ,1 ಸ್ಟೀಲ್ ಹ್ಯಾಂಡ್ ವಾಶ್ ಬೇಸಿನ್, 50 ಬೆಂಚ್, 20 ಗ್ರೀನ್ ಬೋರ್ಡ್ಗಳನ್ನು ವಿತರಿಸಲಾಯಿತು. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಶೇಕಡ 95ಕ್ಕಿಂತಲೂ ಹೆಚ್ಚಿನ ಅಂಕವನ್ನು ಪಡೆದ 15 ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದ ರೂವಾರಿ ಶ್ರೀ ಲಯನ್ ಹಸಿರುಮನೆ ನಂದನ್ ಅವರನ್ನು ಸೌಲಭ್ಯಗಳನ್ನು ಪಡೆದ ಎಲ್ಲಾ ಶಾಲೆಗಳ ಶಿಕ್ಷಕರ ಪರವಾಗಿ ಸನ್ಮಾನಿಸಲಾಯಿತು.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಡ್ಡೇಕೇರಿಯ ಎಸ್ ಡಿ ಎಂ ಸಿ ಯ ಪದಾಧಿಕಾರಿಗಳು ಮತ್ತು ಶಿಕ್ಷಕರು ನಿರಂತರ ಮಳೆಯಲ್ಲಿಯೂ ಸಹ ಅತ್ಯಂತ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಿಸಿದ್ದು ಮೆಚ್ಚುಗೆಗೆ ಪಾತ್ರವಾಯಿತು.

ಇದೇ ವೇಳೆ ಮಕ್ಕಳ ಬಗ್ಗೆ ಕಾಳಜಿ ಹೊಂದಿ ಈ ಕಾರ್ಯಕ್ರಮಕ್ಕೆ ಮುಖ್ಯ ಕಾರಣರಾದ ಹಸಿರು ಮನೆ ನಂದನ್ ರಿಗೆ ಹಾಗೂ ಅತ್ಯುತ್ತಮವಾಗಿ ಕಾರ್ಯಕ್ರಮ ಆಯೋಜಿಸಿದ ಸ ಹಿ ಪ್ರಾ ಶಾಲೆ ಗುಡ್ಡೇಕೇರಿ ತಂಡಕ್ಕೆ ಸಾರ್ವಜನಿಕರು, ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


