Oplus_131072

ಕನ್ನಡ ನಾಡಿನ ಖ್ಯಾತ ಸಾಹಿತಿ, ಆದರ್ಶ ಶಿಕ್ಷಕಿಯೂ ಆಗಿರುವ, ರಾಜ್ಯ, ರಾಷ್ಟ್ರ ಮಟ್ಟದ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ , ಎರಡು ಬಾರಿ ಕರ್ನಾಟಕ ಬುಕ್ ಆಪ್ ರೆಕಾರ್ಡ ಮತ್ತು ವರ್ಲ್ಡ್ ಬುಕ್ ಆಪ್ ರೆಕಾರ್ಡ್ ಲಭಿಸಿರುವ, ಒನ್ ವರ್ಲ್ಡ್‌ ಇಂಟರ್ನ್ಯಾಷನಲ್‌ ಸ್ಕೂಲ್‌ನಲ್ಲಿ ಅಧ್ಯಾಪಕಿಯಾಗಿ ಕಾರ್ಯನಿರ್ವಾಹಿಸಿತ್ತಿರುವ ಶ್ರೀಮತಿ ಡಾ ಮಮತ ಹೆಚ್ ಎ ರವರಿಗೆ ರಾಜ್ಯಮಟ್ಟದ ಆದರ್ಶ ಶಿಕ್ಷಕಿ ಪ್ರಶಸ್ತಿ ದೊರೆತಿದೆ.ವಿಶ್ವ ಕನ್ನಡ ವಾಗ್ವಿಲಾಸ ಕಲೆ-ಸಾಹಿತ್ಯ ಸಾಂಸ್ಕೃತಿಕ ಬಳಗ, ಚೆನ್ನಪಟ್ಟಣ ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಶಿಕ್ಷಣ ಕ್ಷೇತ್ರದಲ್ಲಿ ಸೇವೆ, ಸಾಧನೆ ಮಾಡುತ್ತಿರುವವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

ವಿವಿಧ ಕನ್ನಡ ಸಾಹಿತ್ಯ ಕಾರ್ಯಕ್ರಮಗಳನ್ನು ಆಯೋಗಿಸಿ, ಪಾಲ್ಗೊಂಡು, ಶಾಲಾ ಮಕ್ಕಳಿಗಾಗಿ ೧ನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ಮಾದರಿ ಪುಸ್ತಕಗಳು , ಹತ್ತನೆ ತರಗತಿಯ ಮಕ್ಕಳಿಗಾಗಿ ಪ್ರಶ್ನಕೋಠಿ, ಕವನಗಳು, ಕಾದಂಬರಿಗಳು, ಪ್ರವಾಸ ಕಥನ , ಕಥೆಗಳ ಸಂಗ್ರಹ ಹಾಗೂ ಮಂಗಳಮುಖಿಯ ಜೀವನ ಚರಿತ್ರೆ ಹೀಗೆ ಅನೇಕ ಪುಸ್ತಕಗಳನ್ನು ಬರೆದು ಶಿಕ್ಷಣ ಸೇವೆ, ನಾಡು-ನುಡಿಗಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಡಾ. ಮಮತ ಹೆಚ್. ಎ ರವರ ಅಮೋಘ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿಯನ್ನು ನೀಡುತ್ತಿರುವುದಾಗಿ ಬಳಗದ ಸಂಸ್ಥಾಪಕರಾದ ಅಧ್ಯಕ್ಷರಾದ ಮಹಮದ್ ರಫಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಚನ್ನಪಟ್ಟಣದ ಶತಮಾನೋತ್ಸವ ಭವನದಲ್ಲಿ ಅಕ್ಟೋಬರ್‌ ೬ ರಂದು ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

Oplus_0

Leave a Reply

Your email address will not be published. Required fields are marked *