ಡಾ.ಎಂ.ಎಸ್.ತಿಮ್ಮಪ್ಪ, ಮಂಚಾಲೆ ಇವರು ದಿನಾಂಕ 11-11-2024ರ ತಡರಾತ್ರಿಯಂದು ತಮ್ಮ ಭೌತಿಕ ಶರೀರವನ್ನು ತ್ಯಜಿಸಿದರು. ಶ್ರೀಯುತರು ತಮ್ಮ ಬಾಲ್ಯಕಾಲದಿಂದಲೂ ಶ್ರೀ ಭಗವಾನರ ಭಕ್ತರಾಗಿದ್ದರು. ಶ್ರೀ ಭಗವಾನರ ಆದೇಶದಂತೆ ಮನಃಶಾಸ್ತ್ರವನ್ನು ಅಭ್ಯಸಿಸಿ ಎಂ.ಎ ಪದವಿಯನ್ನು ಪಡೆದು ಡಾಕ್ಟರೇಟ್ ಪಡೆದಿರುತ್ತಾರೆ. ಜೊತೆಗೆ ಬೆಂಗಳೂರು ವಿಶ್ವ ವಿದ್ಯಾನಿಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಶ್ರೀಯುತರ ಆತ್ಮಕ್ಕೆ ಶ್ರೀ ಭಗವಾನರು ಮೋಕ್ಷವನ್ನು ಅನುಗ್ರಹಿಸಲೆಂದು ಶ್ರೀ ಶ್ರೀಧರ ಸೇವಾ ಮಹಾಮಂಡಲವು ಪ್ರಾರ್ಥನೆಯನ್ನು ಸಲ್ಲಿಸುತ್ತದೆ.










