ಶಿವಮೊಗ್ಗ: ಜಿಲ್ಲೆಯ ವಿವಿಧ ಠಾಣೆಗಳ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆಗೊಳಿಸಿ ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕರಾದ ಬಿ ಆರ್ ರವಿಕಾಂತೇ ಗೌಡ ಆದೇಶ ಹೊರಡಿಸಿದ್ದಾರೆ.ಆಗುಂಬೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ ದಕ್ಷ ಅಧಿಕಾರಿ ರಂಗನಾಥ್ ಅಂತರಗಟ್ಟಿ ರವರನ್ನು ಹಾವೇರಿ ಜಿಲ್ಲೆಯ ಸವಣೂರು ಠಾಣೆಗೆ ವರ್ಗಾಯಿಸಲಾಗಿದೆ.

Oplus_131072

ಇದೆ ವೇಳೆ ಶಿವಮೊಗ್ಗದ ಸಿ ಇಎನ್ ಠಾಣೆಯ ಶಿವನಗೌಡರವರನ್ನು ಆಗುಂಬೆ ಠಾಣೆಗೆ ವರ್ಗಾಯಿಸಲಾಗಿದೆ.2 ವರ್ಷದ ರಂಗನಾಥ್ ಅವರ ಕರ್ತವ್ಯದ ಸಮಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಅಪರಾಧವನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಮುಂದಿನ ವೃತ್ತಿ ಜೀವನಕ್ಕೆ ಆಗುಂಬೆ ಜನತೆ ಹಾಗೂ ಸತ್ಯಶೋಧ ಮಾಧ್ಯಮ ಶುಭ ಹಾರೈಸಿದೆ.

Oplus_131072

ಇದೆ ಸಂದರ್ಭದಲ್ಲಿ ಆಗುಂಬೆ ಠಾಣೆಗೆ ವರ್ಗಾವಣೆಗೊಂಡಿರುವ ಸೂಪರ್ ಕಾಪ್ ಶಿವನ ಗೌಡರರು ಕೂಡ ಕರ್ತವ್ಯ ಸಮಯದಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗಿ ನಿರಪರಾಧಿಗಳಿಗೆ ನ್ಯಾಯ ಒದಗಿಸುವುದರೊಂದಿಗೆ ಇತರರಿಗೆ ಮಾದರಿಯಾಗಲಿ ಎಂಬುದೇ ಸತ್ಯಶೋಧ ಮಾಧ್ಯಮದ ಆಶಯ.

Leave a Reply

Your email address will not be published. Required fields are marked *