- ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ಸಂಘ ಸಂಸ್ಥೆಗಳಿಂದ ಆಯೋಜನೆ

ತೀರ್ಥಹಳ್ಳಿ : ದಿ 20 ರ ಶ್ರೀ ನಾರಾಯಣ ಗುರು ವಿಚಾರ ವೇದಿಕೆ ತೀರ್ಥಹಳ್ಳಿ ಹಾಗೂ ರಾಷ್ಟೀಯ ಹಬ್ಬಗಳ ಆಚರಣ ಸಮಿತಿ ಹಾಗೂ ಇತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅದ್ದೂರಿಯಾಗಿ ಶ್ರೀ ನಾರಾಯಣ ಗುರುಗಳ ಜಯಂತಿ ಹಾಗೂ ಮಾಜಿ ಮುಖ್ಯ ಮಂತ್ರಿ ದೇವರಾಜ್ ಅರಸ್ ರವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.ಕ್ಷೇತ್ರದ ಶಾಶಕರಾದ ಆರಗ ಜ್ಞಾನೇಂದ್ರ ರವರ ಅನುಪ ಸ್ಥಿತಿಯಲ್ಲಿ ತಾಲ್ಲೂಕು ದಂಡಧಿಕಾರಿಗಳ ಅಧ್ಯಕ್ಷತೆ ಯಲ್ಲಿ ಸಭೆ ನಡೆದಿದ್ದು,ಸಭೆಯಲ್ಲಿ ಈಡಿಗ ಸಂಘದ ಅಧ್ಯಕ್ಷರಾದ ಮಟ್ಟಿನಮನೆ ರಾಮಚಂದ್ರ, ಬಿಲ್ಲವಾ ಸಂಘದ ಅಧ್ಯಕ್ಷರಾದ ಮಂಜುನಾಥ್,ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ಅಧ್ಯಕ್ಷರಾದ ವಿಶಾಲ್ ಕುಮಾರ್, ಶ್ರೀ ನಾರಾಯಣ ಗುರುಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊದಲ ಶಿವು,ಗ್ಯಾರಂಟಿ ಯೋಜನೆ ಅನುಷ್ಠಾನದ ಅಧ್ಯಕ್ಷರಾದ ಸಚ್ಚಿoದ್ರಾ ಹೆಗಡೆ, ಸ್ಥಾಯೀ ಸಮಿತಿ ಅಧ್ಯಕ್ಷರಾದ ಗಣಪತಿ,ಮಹಿಳಾ ಸಂಘಗಳ ಅಧ್ಯಕ್ಷರುಗಳಾದ ಕುಸುಮ ಕುಮಾರ್,ಸುಜಯಾ ಕಾಂತರಾಜ್, ಗೀತಾ ರಾಘವೇಂದ್ರ, ನಾಗವೇಣಿ ಚಂದ್ರಶೇಖರ್ ಹಾಗೂ ತಾಲ್ಲೂಕು ಆಡಳಿತದ ವಿವಿಧ ಅಧಿಕಾರಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಕೇಂದ್ರಬಿಂದುವಾಗಿ ಸಂಪನ್ಮೂಲ ವ್ಯಕ್ತಿಯಾದ ರವಿಕುಮಾರ್ ರವರ ಅದ್ಭುತ ಭಾಷಣ ಸಭೀಕರನ್ನು ಪ್ರೆರೇಪಿಸಿತು ಜೊತೆಗೆ ಸಂಘಟನೆಯ ಎಲ್ಲಾ ನಿರ್ದೇಶಕರು ಸಮಾಜದ ವಿವಿಧ ಗಣ್ಯರು ಶಾಲೆಯ ಮಕ್ಕಳು ಪಾಲ್ಗೊಂಡಿದ್ದರು.



