
ಬೆಂಗಳೂರು: ಶ್ರೀ ಸರಸ್ವತಿ ಎಜುಕೇಷನ್ ಟ್ರಸ್ಟ್ (ರಿ) ಸಹಯೋಗದೊಂದಿಗೆ ತೊದಲ್ನುಡಿ ಮಾಸಪತ್ರಿಕೆಯ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಮತ್ತು ಉತ್ತಮ ಶಿಕ್ಷಕಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಶ್ರೀ ಸರಸ್ವತಿ ಆರ್ ಅವರಿಗೆ ಉತ್ತಮ ಶಿಕ್ಷಕಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಪ್ರಶಸ್ತಿ ನೀಡಿ ಮಾತನಾಡಿದ ಮುಖ್ಯ ಅತಿಥಿ ಮಾಜಿ ರಾಷ್ಟ್ರಪತಿಗಳಾದ ದಿ. ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಮತ್ತು ದಿ. ಡಾ. ವಿ. ವಿ. ಗಿರಿ ಅವರ ಮೊಮ್ಮಗ ಸುದೀಕ್ಷಾ ಗ್ರೂಪ್ ಅಧ್ಯಕ್ಷ ಡಾ. ಸುಬ್ರಮಣ್ಯಂ ಶರ್ಮ ಜಿ ಅವರು, ‘ಮಕ್ಕಳೇ ದೇಶದ ಆಸ್ತಿ, ದೇಶದ ಒಳಿತಿಗಾಗಿ ಏಳ್ಗೆಗಾಗಿ ನೀವು ಏನೇ ಮಾಡಿದರು ನಿಮ್ಮೊಂದಿಗಿರುತ್ತೇನೆ. ಗುರು – ಶಿಷ್ಯರ ಬಾಂಧವ್ಯ ಎಲ್ಲಾ ಬಂಧಗಳಿಗಿಂತ ಮಿಗಿಲಾದದ್ದು. ಪ್ರತಿನಿತ್ಯ ಅಧ್ಯಾಪಕರ ದಿನಾಚರಣೆಯನ್ನಾಗಿಸಿ, ಅವರಿಗೆ ಗೌರವ ಸಲ್ಲಿಸಿ’ ಎಂದರು. ಡಾ. ಸುಷ್ಮಾ ಶಂಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್ಟ್ ಆಫ್ ಲಿವಿಂಗ್ನ ಆಚಾರ್ಯರಾದ ಶ್ರೀ ಆರ್ ಶ್ರೀನಿವಾಸ್, ಲೋಕ ಕೇರಳ ಸಭೆಯ ಸದಸ್ಯರಾದ ಶ್ರೀ ಕುಂಞಪ್ಪನ್, ಕೇಂಬ್ರಿಡ್ಜ್ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಪ್ರೊ. ರಾಕೇಶ್ ವಿ. ಎಸ್,ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಮಲರ್ ವಿಳಿ ಕೆ ಮುಂತಾದವರು ಉಪಸ್ಥಿತಸಿದ್ದರು.




