- ಮತ್ತಿಕೈ ಗ್ರಾಮದಲ್ಲಿ ನೀರವ ಮೌನ

ಹೊಸನಗರ: ತನ್ನ ಎರಡೂ ಮಕ್ಕಳ ಜೊತೆಗೆ ತಾನು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾದ ಹೃದಯ ವಿದ್ರಾವಕ ಘಟನೆ ತಾಲೂಕಿನ ನಗರ ಹೋಬಳಿ ವ್ಯಾಪ್ತಿಯ ಮತ್ತಿಕೈ ಗ್ರಾಮದಲ್ಲಿ ನಡೆದಿದೆ.ಚಂಪಕಾಪುರ ವಾಸಿ ರಾಜೇಶ್ ಎಂಬುವವರ ಪತ್ನಿ ವಾಣಿ(32)ಹಾಗೂ ಮಕ್ಕಳಾದ ಸಮರ್ಥ (12), ಸಂಪದ(6) ಮೃತರಾದ ದುರ್ಧೈವಿಗಳು.ಗುರುವಾರ ರಾತ್ರಿ ಈ ಘಟನೆ ಸಂಭವಿಸಿದ್ದ ತಡವಾಡಿ ಬೆಳಕಿಗೆ ಬಂದಿದೆ.ನಗರ ಠಾಣೆ ಪಿಎಸ್ ಐ ರಮೇಶ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮೃತ ದೇಹಗಳನ್ನು ಬಾವಿಯಿಂದ ಮೇಲಕ್ಕೆ ಎತ್ತಲಾಗಿದ್ದು, ನಗರದ ಸರ್ಕಾರ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ಸಿದ್ದತೆ ನಡೆದಿದೆ.ಈ ದುರ್ಘಟನೆಯಿಂದ ಚಂಪಕಾಪುರ ಸುತ್ತಲೂ ನೀರವ ಮೌನ ಆವರಿಸಿದೆ.



