
ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿ ಆರನೇ ತಿರುವಿನಲ್ಲಿ ಬೃಹತ್ ಮರ ಒಂದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಸಂಚಾರ ಅಸ್ತವ್ಯಸ್ತವಾಗಿದೆ. ಸೆ 20 ರ ಮಧ್ಯಾಹ್ನ ವೇಳೆಗೆ ಮರ ತೆರವು ಗೊಳಿಸಲಾಗುವುದೆಂದು ಬಲ್ಲಮೂಲಗಳಿಂದ ಮಾಹಿತಿ ಸಿಕ್ಕಿದೆ.



ಇದೆ ವೇಳೆ ಪಿಕಪ್ ವಾಹನದ ಮೇಲೆ ಮರ ಬಿದ್ದು ವಾಹನದಲ್ಲಿದ್ದ ಓರ್ವನಿಗೆ ಪೆಟ್ಟಾಗಿದ್ದು ಆತನನ್ನು ತಕ್ಷಣ ಆಸ್ಪತ್ರೆಗೆ ರವಾನಿಸಲಾಗಿದೆ.


