
ತೀರ್ಥಹಳ್ಳಿ :ಒರಿಯಂಟಲ್ ಫೌಂಡೇಶನ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಕೊಡಮಾಡ ಲಿರುವ ಇಂಡಿಯನ್ ಐಕನ್ ಅವಾರ್ಡ್ ಅನ್ನು ತಾಲೂಕು ಪಂಚಾಯತ್ ನರೇಗಾ

ಇಂಜಿನಿಯರ್ ಗಳಾದ ಸುನಿಲ್ ಕುಮಾರ್ ಜಿ ಎಚ್ ಹಾಗೂ ಪ್ರತಾಪ್ ಎಮ್ ಇವರಿಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಜು. 15 ರ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ.



ತಾಲೂಕು ಪಂಚಾಯತ್ ನರೇಗಾ ಇಂಜಿನಿಯರ್ಗಳಾಗಿ ತಾಲೂಕಿನ ಹಲವೆಡೆ ತಮ್ಮ ವ್ಯಾಪಿಯಲ್ಲಿ ಬರುವ ಕೆಲಸ ಕಾರ್ಯಗಳನ್ನ ಉತ್ತಮ ಹಂತದಲ್ಲಿ ಮಾಡಿ ಜನ ಮನ ಗೆದ್ದ ಸುನಿಲ್ ಕುಮಾರ್ ಜಿ ಎಚ್ ಹಾಗೂ ಪ್ರತಾಪ್ ಎಮ್ ಇವರಿಗೆ ತೀರ್ಥಹಳ್ಳಿ ಜನತೆ ಸತ್ಯಶೋಧ ಮಾಧ್ಯಮದ ಮೂಲಕ ಶುಭ ಹಾರೈಸಿದ್ದಾರೆ. ಮುಂದೆಯೂ ಒಳ್ಳೆಯ ಕೆಲಸ ಮಾಡಿ ಇತರರಿಗೆ ಮಾದರಿಯಾಗಲಿ ಎಂಬುದು ಮಾಧ್ಯಮದ ಆಶಯವಾಗಿದೆ.
