- ಕಾರ್ಯಗಾರಕ್ಕೆ ಸರ್ವರಿಗೂ ಸ್ವಾಗತ

ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ‘ಸಪ್ತಸ್ವರ’ ವೇದಿಕೆಯಲ್ಲಿ 10 ಆಗಸ್ಟ್ 2024ರಂದು ಅಪರಾಹ್ನ 2.30 ರಿಂದ 4.00 ಗಂಟೆಯವರೆಗೆ “BUZZ @ CREATIVE” ಎಂಬ ಶೀರ್ಷಿಕೆಯಡಿಯಲ್ಲಿ ” ಬಜೆಟ್ ನಿಂದ ತೆರಿಗೆಯಲ್ಲಿನ ಹೊಸ ಬದಲಾವಣೆಗಳು ” ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಾಗಾರ ನಡೆಯಲಿದೆ. ಸಮಾರಂಭಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿರುವ CA ನಿತೇಶ್ ಶೆಟ್ಟಿ, CA ಚರಣ್ ರಾಜ್ ಮುಚ್ಚೂರು, CA ಸುಮಂತ್ ಬಂಗೇರ ರವರು ಮತ್ತು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಶ್ರೀಯುತ ಅಮೃತ್ ರೈ ರವರು ಮಾಹಿತಿಗಳನ್ನು ನೀಡಲಿದ್ದಾರೆ. ಎಲ್ಲಾ ವ್ಯಾಪಾರಿಗಳು, ಸಣ್ಣ ಮತ್ತು ಬೃಹತ್ ಉದ್ಯಮದಾರರೆಲ್ಲರೂ ಅತ್ಯವಶ್ಯವಾಗಿ ತಿಳಿಯಲೇಬೇಕಾದ ಮಾಹಿತಿ ಕಾರ್ಯಕ್ರಮ ಇದಾಗಿದ್ದು, ಸಮಾರಂಭದಲ್ಲಿ ಭಾಗಿಗಳಾಗಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಕಾರ್ಕಳದ ಜನತೆ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಬಯಸುತ್ತಿದೆ.ಕಾರ್ಯಗಾರಕ್ಕೆ ಸರ್ವರಿಗೂ ಸ್ವಾಗತವನ್ನು ಬಯಸುವ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳ.
