- ಭೀಮನ ಅಮವಾಸೆಯಂದೇ ಅಪಹರಣ
- ರಾಜ್ ಕುಮಾರ್ ರನ್ನು ಅಪಹರಣ ಮಾಡಲು ಐಡಿಯ ಕೊಟ್ಟಿದ್ದು ಯಾರು ಗೊತ್ತಾ

ವೀರಪ್ಪನ್, ರಾಜ್ಕುಮಾರ್ ಅವರನ್ನು ಅಪಹರಿಸಿ 24 ವರ್ಷಗಳಾದವು.24 ವರ್ಷದ ಹಿಂದೆ ಇದೇ ಭೀಮನ ಅಮವಾಸ್ಯೆ ದಿನವೇ ರಾಜ್ಕುಮಾರ್ ಅಪಹರಣವಾಗಿತ್ತು.ಯಾರನ್ನೇ ಅಪಹರಿಸಿದರೂ ಹಣ ಸಿಕ್ಕಿಬಿಡುತ್ತದೆ ಎಂಬ ಮೂಡನಂಬಿಕೆಯಲ್ಲಿದ್ದ ವೀರಪ್ಪನ್ ರಾಜ್ಕುಮಾರ್ ಅವರನ್ನು ಅಪಹರಿಸುವ ಮುನ್ನ ಕರ್ನಾಟಕದ ಖ್ಯಾತ ವನ್ಯಜೀವಿ ಸಂಶೋಧಕರೂ ಫೊಟೊಗ್ರಾಫರ್ಗಳೂ ಆಗಿರುವ ಕೃಪಾಕರ ಮತ್ತು ಸೇನಾನಿಯನ್ನು ಅಪಹರಣ ಮಾಡಿದ್ದ. ಆದರೆ ಆ ಇಬ್ಬರೂ, ವೀರಪ್ಪನ್ ಗೆ ಚೆನ್ನಾಗಿ ಮನವರಿಕೆ ಮಾಡಿಸಿದ ಬಳಿಕ ಇಬ್ಬರನ್ನೂ ಬಿಟ್ಟು ಕಳಿಸಿದ್ದ. ಅದಾದ ಬಳಿಕ ಫ್ರೊಫೆಸರ್ ಒಬ್ಬನನ್ನು ಕಿಡ್ನ್ಯಾಪ್ ಮಾಡಿದ್ದ. ಆದರೆ ಆತನಿಗೆ ಹಣ ಸಿಗಲಿಲ್ಲ. ಆಗ ವೀರಪ್ಪನ್ಗೆ ಅರಿವಾಗಿದ್ದು ದೊಡ್ಡ ವ್ಯಕ್ತಿಗಳನ್ನು ಅಪಹರಿಸಿದರೆ ಮಾತ್ರವೇ ಹಣ ಸಿಗುತ್ತದೆ ಎಂಬ ದುಷ್ಟ ಆಲೋಚನೆ ಬಂದಿದ್ದುಗಾಜನೂರಿನ ಮನೆ ಕಟ್ಟುವ ಕಾರ್ಮಿಕನಾಗಿ ಕೆಲಸ ಮಾಡಿದ್ದವೀರಪ್ಪನ್ ತಂಡದಲ್ಲಿದ್ದ ಸಹಚರ ರಾಜ್ಕುಮಾರ್ ಅವರನ್ನು ಅಪಹರಿಸುವ ಸುಳಿವು ನೀಡಿದ್ದು ಎಂಬ ವರದಿಗಳಿವೆ.2000ನೇ ಇಸವಿಯ ಜುಲೈ 30 ರಂದು ಗಾಜನೂರಿನ ಮನೆಯಿಂದ ಭೀಮನ ಅಮಾವಾಸ್ಯೆಯಂದೇ ವೀರಪ್ಪನ್ ರಾಜ್ಕುಮಾರ್ ಅವರನ್ನು ವೀರಪ್ಪನ್ ಅಪಹರಣ ಮಾಡಿದ.


