• ಭೀಮನ ಅಮವಾಸೆಯಂದೇ ಅಪಹರಣ
  • ರಾಜ್ ಕುಮಾರ್ ರನ್ನು ಅಪಹರಣ ಮಾಡಲು ಐಡಿಯ ಕೊಟ್ಟಿದ್ದು ಯಾರು ಗೊತ್ತಾ

ವೀರಪ್ಪನ್, ರಾಜ್​ಕುಮಾರ್ ಅವರನ್ನು ಅಪಹರಿಸಿ 24 ವರ್ಷಗಳಾದವು.24 ವರ್ಷದ ಹಿಂದೆ ಇದೇ ಭೀಮನ ಅಮವಾಸ್ಯೆ ದಿನವೇ ರಾಜ್​ಕುಮಾರ್ ಅಪಹರಣವಾಗಿತ್ತು.ಯಾರನ್ನೇ ಅಪಹರಿಸಿದರೂ ಹಣ ಸಿಕ್ಕಿಬಿಡುತ್ತದೆ ಎಂಬ ಮೂಡನಂಬಿಕೆಯಲ್ಲಿದ್ದ ವೀರಪ್ಪನ್ ರಾಜ್​ಕುಮಾರ್ ಅವರನ್ನು ಅಪಹರಿಸುವ ಮುನ್ನ ಕರ್ನಾಟಕದ ಖ್ಯಾತ ವನ್ಯಜೀವಿ ಸಂಶೋಧಕರೂ ಫೊಟೊಗ್ರಾಫರ್​ಗಳೂ ಆಗಿರುವ ಕೃಪಾಕರ ಮತ್ತು ಸೇನಾನಿಯನ್ನು ಅಪಹರಣ ಮಾಡಿದ್ದ. ಆದರೆ ಆ ಇಬ್ಬರೂ, ವೀರಪ್ಪನ್ ಗೆ ಚೆನ್ನಾಗಿ ಮನವರಿಕೆ ಮಾಡಿಸಿದ ಬಳಿಕ ಇಬ್ಬರನ್ನೂ ಬಿಟ್ಟು ಕಳಿಸಿದ್ದ. ಅದಾದ ಬಳಿಕ ಫ್ರೊಫೆಸರ್ ಒಬ್ಬನನ್ನು ಕಿಡ್ನ್ಯಾಪ್ ಮಾಡಿದ್ದ. ಆದರೆ ಆತನಿಗೆ ಹಣ ಸಿಗಲಿಲ್ಲ. ಆಗ ವೀರಪ್ಪನ್​ಗೆ ಅರಿವಾಗಿದ್ದು ದೊಡ್ಡ ವ್ಯಕ್ತಿಗಳನ್ನು ಅಪಹರಿಸಿದರೆ ಮಾತ್ರವೇ ಹಣ ಸಿಗುತ್ತದೆ ಎಂಬ ದುಷ್ಟ ಆಲೋಚನೆ ಬಂದಿದ್ದುಗಾಜನೂರಿನ ಮನೆ ಕಟ್ಟುವ ಕಾರ್ಮಿಕನಾಗಿ ಕೆಲಸ ಮಾಡಿದ್ದವೀರಪ್ಪನ್ ತಂಡದಲ್ಲಿದ್ದ ಸಹಚರ ರಾಜ್​ಕುಮಾರ್ ಅವರನ್ನು ಅಪಹರಿಸುವ ಸುಳಿವು ನೀಡಿದ್ದು ​ ಎಂಬ ವರದಿಗಳಿವೆ.2000ನೇ ಇಸವಿಯ ಜುಲೈ 30 ರಂದು ಗಾಜನೂರಿನ ಮನೆಯಿಂದ ಭೀಮನ ಅಮಾವಾಸ್ಯೆಯಂದೇ ವೀರಪ್ಪನ್ ರಾಜ್​ಕುಮಾರ್ ಅವರನ್ನು ವೀರಪ್ಪನ್ ಅಪಹರಣ ಮಾಡಿದ.

Leave a Reply

Your email address will not be published. Required fields are marked *