

ಜಯಪುರ: ಜಿಲ್ಲಾಧಿಕಾರಿಗಳ ವಿಶೇಷ ಅನುದಾನದಿಂದ ಗುಡ್ಡೆತೋಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಭೈರೆದೇವರು ಗ್ರಾಮದ ಶಾಂತಿಗ್ರಾಮದಲ್ಲಿದ್ದ ತಾತ್ಕಾಲಿಕ ಕಬ್ಬಿಣ ಸೇತುವೆಯನ್ನು ಅಲ್ಲಿಂದ ತೆಗೆದು ಸಮೀಪದ ಬಾಗಿಲುಗದ್ದೆ ಗ್ರಾಮಕ್ಕೆ ಸ್ಥಳಾಂತರಿಸಲಾಯಿತು. ಇದರಿಂದ ಬಾಗಿಲುಗದ್ದೆ ಗ್ರಾಮಸ್ಥರ ಬಹು ವರ್ಷದ ಬೇಡಿಕೆಯೊಂದು ಈಡೇರಿದಂತಾಗಿದೆ.ಮೂರ್ನಾಲ್ಕು ವರ್ಷದ ಹಿಂದೆ ಮಳೆಗಾಲದಲ್ಲಿ ಶಾಂತಿಗ್ರಾಮ ಸೇತುವೆ ಕುಸಿದಿದ್ದರಿಂದ ಅಲ್ಲೊಂದು ತಾತ್ಕಾಲಿಕವಾಗಿ ಕಬ್ಬಿಣ ಸೇತುವೆ ಮಾಡಲಾಗಿತ್ತು ಈಗ ಶಾಂತಿಗ್ರಾಮಕ್ಕೆ ಹೊಸ ಸೇತುವೆ ನಿರ್ಮಾಣವಾದ ನಂತರ ಈ ಕಬ್ಬಿಣ ಸೇತುವೆ ಹಾಗೆಯೆ ಇತ್ತು

ಅದನ್ನು ಮನಗಂಡ ಗುಡ್ಡೆ ತೋಟ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರುಗಳಾದ ಕೀರ್ತಿ ಸುಂದರರಾಜ್ ಹಾಗೂ ಪ್ರಶಾಂತ್ ಜಾಲ್ಮರ ಅವರ ನೇತೃತ್ವದಲ್ಲಿ, ಜಯಪುರ ಆರಕ್ಷಕರು ಹಾಗೂ ಗ್ರಾಮ ಪಂಚಾಯತಿ ಸದ್ಯಸರು ಮತ್ತು ಗ್ರಾಮಸ್ಥರ ಸಹಕಾರದಿಂದ ಸ್ಥಳಾಂತರ ಕಾರ್ಯ ನಡೆದಿದೆ.ಶಾಂತಿಗ್ರಾಮದಿಂದ ಬಾಗಿಲುಗದ್ದೆಗೆ ಸ್ಥಳಾಂತರ ಮಾಡಿದ್ದು ಸೇತುವೆಯ ಕೆಲಸ ಸಂಪೂರ್ಣ ಆದ ನಂತರ ವಾಹನಗಳಿಗೆ ಪ್ರವೇಶಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು.

*ಬಹಳ ವರ್ಷಗಳ ಹಿಂದೆಯೇ ಸೇತುವೆಗೆ ಬೇಡಿಕೆ ಇಟ್ಟಿದ್ದೆವು ಆಗಿರಲಿಲ್ಲ ಈಗ ನಮ್ಮೂರಿಗೆ ಕಬ್ಬಿಣ ಸೇತುವೆ ಸ್ಥಳಾಂತರ ಮಾಡಿರುವುದು ಸಂತಸ ತಂದಿದೆ. ಸೇತುವೆಯ ಸಂಪೂರ್ಣ ಕೆಲಸ ಆದರೆ ನಮ್ಮೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೂ ಅನುಕೂಲ ಆಗಲಿದೆ.
ವರದಿ: ಶಶಿಕುಮಾರ್ ಬೆತ್ತದಕೊಳಲು