• ಸೌಹಾರ್ದತೆ ಮೆರೆದ ರಾಜೀವ್ ನಗರದ ಜನತೆ.

ಶೃಂಗೇರಿ ಕ್ಷೇತ್ರದ ನ.ರ.ಪುರ ತಾಲೂಕಿನ ರಾಜೀವ್ ನಗರದಲ್ಲಿ ಪ್ರತಿಷ್ಠಾಪನೆ ಗೊಂಡ ಗಣಪತಿ ರಾಜ್ಯಾದ್ಯಂತ ಸುದ್ದಿಯಲ್ಲಿದೆ.ಕಳೆದ 14 ವರ್ಷದಿಂದ ಎಲ್ಲಾ ಧರ್ಮದವರು ಒಗ್ಗೂಡಿ ವಿನಾಯಕ ಸೇವಾ ಸಮಿತಿ ರಚಿಸಿಕೊಂಡು 3 ದಿನಗಳ ಕಾಲ ಗಣೇಶೋತ್ಸವ ಆಚರಿಸಿದ್ದರೆ.ಇತೀಚೆಗೆ ನಾವೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಕಂಡಂತೆ ಅದ್ಯಾವುದೋ ಊರಿನಲ್ಲಿ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಮಸೀದಿಯವರು ಯಾವುದೇ ರೀತಿಯ ಪಾನಕಗಳನ್ನು ಅಥವಾ ಇತರೆ ತಿಂಡಿ ತಿನಿಸುಗಳನ್ನು ನೀಡಬಾರದು ಎಂಬ ಸಂದೇಶವಿರುವ ಒಂದು ಪ್ರತಿಯನ್ನು ಕಂಡ್ದಿದ್ದೇವೆ ಅದೇರೀತಿ ಎಲ್ಲಾ ಧರ್ಮದವರು ಸೇರಿಕೊಂಡು ಆಚರಣೆ ಮಾಡುತ್ತಿರುವ ಗಣಪತಿಗೆ “ಸರ್ವ ಧರ್ಮಗಳ ಸೌಹಾರ್ದ ಗಣಪತಿ” ಎಂದು ಹೆಸರಿಟ್ಟು ಸೌಹಾರ್ದತೆ ಮೆರೆಯುತ್ತಿರುವ ಘಟನೆಯು ನಮ್ಮ ಮುಂದಿದೆ. ಈ ಗಣಪತಿ ಸಮಿತಿಗೆ ಪಟ್ಟಣ ಪಂಚಾಯಿತಿ ಸದಸ್ಯೆ ಹಾಗೂ ಸಮಾಜ ಸೇವಕಿಯಾಗಿರುವ ಜುಬೇದ ಅವರು ಕಳೆದ 14 ವರ್ಷದಿಂದಲೂ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು ಈ ವರ್ಷವೂ ಎಲ್ಲರ ಒತ್ತಾಯದ ಮೇರೆಗೆ ಪುನಃ ಅಧ್ಯಕ್ಷರಾಗಿ ಆಯ್ಕೆಯಾಗಿ ಸಾರ್ವಜನಿಕ ಪ್ರಶಂಸೆಯನ್ನು ಗಳಿಸಿದ್ದಾರೆ. ಸಾರ್ವಜನಿಕ ಕಾರ್ಯಗಳಲ್ಲಿ ಸದಾ ಸುದ್ದಿಯಲ್ಲಿರುವ ಜುಬೇದರವರು ತಮ್ಮ ವೈಯಕ್ತಿಕ ಬದುಕನ್ನು ಸಾರ್ವಜನಿಕ ಜೀವನಕ್ಕಾಗಿ ಮುಡುಪಾಗಿಟ್ಟಿದ್ದಾರೆ ಎಂದರೆ ತಪ್ಪಾಗಲಾರದು.ಭಕ್ತಿ,ಭಾವೈಕ್ಯತೆ ಹಾಗು ಸೌಹಾರ್ದತೆ ಹಿನ್ನೆಲೆಯಲ್ಲಿ ಬಾಲಗಂಗಾಧರ ತಿಲಕ್ ರವರ ಮುಂದಾಳತ್ವದಲ್ಲಿ ಸ್ವತಂತ್ರ ಸಂಗ್ರಾಮದ ಆ ದಿನದಲ್ಲಿ ಪ್ರತಿಷ್ಠಾಪನೆಗೊಂಡ ಗಣಪತಿ ಇತ್ತೀಚಿನ ದಿನಗಳಲ್ಲಿ ಬಹಳ ವಿರಳವಾಗಿದೆ ಸೌಹಾರ್ದತೆ ಎಂಬುದು ಮಾಯವಾಗಿರುವ ಈ ದಿನದಲ್ಲಿ ರಾಜೀವ್ ನಗರದ ಪ್ರಜ್ಞಾವಂತ ಜನತೆ ಸೌಹಾರ್ದತೆ ಇನ್ನೂ ಜೀವಂತವಾಗಿದೆ ಎಂದು ತೋರಿಸಿ ಕೊಟ್ಟಿದ್ದಾರೆ. ಈ ಗಣೇಶ ಸಮಿತಿಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಮಗೇಶ, ಬುದ್ದೇಶ ಹಾಗೂ ಖಜಾಂಚಿಯಾಗಿ ಸುಜಾತಾ ಆಯ್ಕೆಯಾಗಿದ್ದಾರೆ. ಈ ವಿನಾಯಕ ಸೇವಾ ಸಮಿತಿ ಯಲ್ಲಿ ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯದ ಸದಸ್ಯರಿದ್ದು ಎಲ್ಲರೂ ಒಟ್ಟಾಗಿ ಹಿಂದೂ ಸಂಪ್ರದಾಯದಂತೆ 3 ದಿನಗಳ ಕಾಲ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ, ಗಣಪತಿ ವಿಸರ್ಜನೆ ನಡೆಸಿ ಕೋಮು ಸೌಹಾರ್ದತೆಗೆ ಮಾದರಿಯಾಗಿದ್ದಾರೆ.

Leave a Reply

Your email address will not be published. Required fields are marked *