Oplus_131072

ಚಿಕ್ಕಮಗಳೂರು : ಜಿಲ್ಲೆಯ ಕೊಪ್ಪದ ಶ್ರೀ ದೇವಿ ಧಾರ್ಮಿಕ ಮಂದಿರ ಹುಲ್ಲು ಮಕ್ಕಿಯಲ್ಲಿ ದಿ 25 – 05 – 2025 ರಂದು ಮಾತೋಶ್ರೀ ಸುಭದ್ರಮ್ಮ ಮಂಜುನಾಥ್ ಭಟ್ ಸಂಸ್ಕಾರಣಾರ್ಥ ಮಲೆನಾಡ ಮಡಿಲಲ್ಲಿ ಕನ್ನಡೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯ ಅತಿಥಿ ಯಾದ ಶಂ ನ ಶೇಷಗಿರಿ ಇವರು ನೆರವೇರಿಸಿದರು.ಈ ಸಮಾರಂಭದಲ್ಲಿ ತೈರೊಳ್ಳಿ ಮಂಜುನಾಥ ಉಡುಪರ ದೇವಲೋಕದ ಕಾಗೆ, ಹಾಗೂ ಪುರಾಣದ ಕಥೆಗಳು, ರೂಪಕಲ ಕೆ ಎಂ ಇವರ ಕನವರಿಕೆ, ಜೊತೆಗೆ ನಾಗರತ್ನ ಮಹಾಬಲ ಹೊಳ್ಳ ಇವರ ಪಾರಿಜಾತ ಪುಸ್ತಕಗಳು ಲೋಕಾರ್ಪಣೆಗೊಂಡವು.ಇನ್ನು ಇದೆ ವೇಳೆ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಲಾಯಿತು.

ಮಾತೋ ಶ್ರೀ ಸುಭದ್ರಮ್ಮ ಮಂಜುನಾಥ ಭಟ್ ಇವರ ಸಂಸ್ಮರಣೆ ಶ್ರೀಮತಿ ರಕ್ಷಾ ರಾಜೇಶ್ ಇವರಿಗೆ ಬಹುಮುಖ ಪ್ರತಿಭಾ ದೀಪ್ತಿ ಪ್ರಶಸ್ತಿ ನೀಡಲಾಯಿತು, ಜಿ ವಿ ಗಣೇಶಯ್ಯ ಬೊಮ್ಮನ ಕೊಡಿಗೆ ಇವರಿಗೆ ದಿ ಶಿವ ಸ್ವಾಮಿ ಸೋಮಲಾ ಪುರ ಸಂಸ್ಮರಣೆ ವತಿಯಿಂದ ಕನ್ನಡ ಭೂಷಣ ಪ್ರಶಸ್ತಿ -25 ನೀಡಲಾಯಿತು. ಮುಖ್ಯೋಪಾಧ್ಯಾಯರಾದ ಶ್ರೀ ಮಂಜುಬಾಬು ಹೆಚ್ ಪಿ ಹುಣಸೆ ಕಟ್ಟೆ,ಚಿತ್ರದುರ್ಗ ಇವರಿಗೆ ಮಾತೋಶ್ರೀ ವೇದಾವತಿ ಮತ್ತು ಮಾಧವಿ ಲತಾ ಚಪ್ಪಳಕಟ್ಟೆ ಸಂಸ್ಮರಣೆ ವತಿಯಿಂದ ಕನ್ನಡ ಸಾಹಿತ್ಯ ಚೇತನ ಪ್ರಶಸ್ತಿ – 25 ನೀಡಿ ಗೌರವಿಸಲಾಯಿತು.

Oplus_131072

ವೇದಿಕೆಯಲ್ಲಿ ಗಮಕಾರ್ಥಗಾರಿಕೆ, ಗೀತಾಗಾಯನ ಉಪನ್ಯಾಸ ಹೀಗೆ ಹಲವು ಬಗೆಯ ಸಾಹಿತ್ಯ ಕಾರ್ಯಕ್ರಮವು ಜರುಗಿದ್ದು ಪ್ರೇಕ್ಷಕರನ್ನು ತಲ್ಲಣಗೊಳಿಸುವಂತೆ ಮಾಡಿದವು.ಮದ್ಯಾಹ್ನದ ನಂತರ ತೈರೊಳ್ಳಿ ಮಂಜುನಾಥ್ ಉಡುಪರ ಪುರಾಣದ ಕಥೆಗಳು ಎಂಬ ಕೃತಿಯನ್ನು ಅರುಣ್ ಮಂಜುನಾಥ್ ಹಾಗೂ ಅಧ್ಯಕ್ಷರಾದ ರೇವತಿ ಕೆ ಎಂ, ತೈರೊಳ್ಳಿ ಮಂಜುನಾಥ್ ಉಡುಪ, ಧನಂಜಯ ಮೂರ್ತಿ ಬಿಡುಗಡೆ ಮಾಡಿದರು.

ಕವಿಗೋಷ್ಠಿ ಶುರುವಾಗಿದ್ದು ಹಳೆ ಬೇರು ಹೊಸ ಚಿಗುರು ಎಂಬಂತೆ ವಿಂಗಡಿಸಿ ಒಟ್ಟು 22 ಕವಿಗಳು ಹಾಗೂ 4 ಜನ ಪುಟಾಣಿ ಮಕ್ಕಳು ಕವನಗಳನ್ನು ವಾಚಿಸಿದರು. ವೇದಿಕೆಯಲ್ಲಿ ಅಧ್ಯಕ್ಷರಾದ ರೇವತಿ ಕೆ ಎಂ, ಎಂ ಎಂ ಪ್ರಭಾಕರ್ ಕಾರಂತ್,ರೂಪಕಲಾ ಕೆ ಎಂ,ತೈರೊಳ್ಳಿ ಮಂಜುನಾಥ್ ಉಡುಪ, ವಿದ್ಯುಷಿ ಡಾ ಶ್ಯಾಮಲಾ ಪ್ರಸಾದ್, ಜೆ ಎಂ ಶ್ರೀಹರ್ಷ, ಧನಂಜಯ ಮೂರ್ತಿ ಅರುಣ್ ಮಂಜುನಾಥ್ ಹಾಗೂ ಕವಿಗಳು ಸಾಹಿತ್ಯ ಪ್ರಿಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *