- ಸುಂದರ ನಾಟಕ ಕಣ್ತುಂಬಿಕೊಳ್ಳಿ – ಸುಧೀರ್ ಕುಮಾರ್ ಮುರೋಳಿ
ರಂಗ ಸಿಂಗಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಕೊಪ್ಪ ಇವರ ಸಂಯುಕ್ತ ಆಶ್ರಯದಲ್ಲಿ ಸೆಪ್ಟೆಂಬರ್ 28ರ ಶನಿವಾರ ಸಂಜೆ 6.30ಕ್ಕೆ ಸರಿಯಾಗಿ ನಡೆಯಲಿರುವ *”ಜೊತೆಗಿರುವನು ಚಂದಿರ”* ಎಂಬ ನಾಟಕ ಕೊಪ್ಪದ ಬಾಳಾಗಡಿಯ ದೇವೇಗೌಡ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.ಆರಂಭದಲ್ಲಿ ಕುಪ್ಪಳ್ಳಿ ಯಲ್ಲಿ ಆಯೋಜನೆಗೊಂಡಿದ್ದ ಈ ಕಾರ್ಯಕ್ರಮ ಮಳೆಯ ಕಾರಣದಿಂದ ಕೊಪ್ಪದ ಬಾಲ ಗಡಿ ರಸ್ತೆಯ ದೇವೇಗೌಡ ಕಲ್ಯಾಣ ಮಂಟಪದಲ್ಲಿ ನಡೆಸಲು ಆಯೋಜಕರು ತೀರ್ಮಾನಿಸಿದ್ದು ” ಫಿಡ್ಲರ್ ಆನ್ ದಿ ರೂಫ್”ರಚಿತ ನಾಟಕ ಕೊಪ್ಪದಲ್ಲಿ ನಡೆಯಲಿದೆ.ಈ ಒಂದು ಸುಂದರ ನಾಟಕದ ಮಧುರ ಕ್ಷಣ ಕಣ್ತುಂಬಿಸಿಕೊಳ್ಳಲು ನಾಗರಿಕ ಬಂಧುಗಳು, ಸಾಹಿತ್ಯ ಪ್ರೇಮಿಗಳು, ಕಲಾಭಿಮಾನಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಈ ಸುಂದರ ನಾಟಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮುಖಂಡರಾದ ಸುಧೀರ್ ಕುಮಾರ್ ಮುರೋಳಿಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಕಾರ್ಯಕ್ರಮದ ಕೇಂದ್ರಬಿಂದು ವಾದ ಕಲಾವಿದ ಹುಲುಗಪ್ಪ ಕಟ್ಟೀಮನಿ,ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಜೆ.ಎಂ ಶ್ರೀ ಹರ್ಷ ಸೇರಿದಂತೆ ಅನೇಕ ಗಣ್ಯರು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.





