- ಸಾಹಿತ್ಯ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜು
- ಪ್ರಶಸ್ತಿ ಪ್ರಧಾನ, ಕೃತಿ ಲೋಕಾರ್ಪಣೆ, ಕವಿಗೋಷ್ಠಿಕ್ಕೆ ಪ್ರೀತಿಯ ಕರೆಯೋಲೆ


ಚಿಕ್ಕಮಗಳೂರು : ತಾಲೂಕಿನ ಕೊಪ್ಪದ ಶ್ರೀ ದೇವಿ ಧಾರ್ಮಿಕ ಮಂದಿರ ಹುಲ್ಲು ಮಕ್ಕಿಯಲ್ಲಿ ದಿ 25 – 05 – 2025 ರಂದು ಮಾತೋಶ್ರೀ ಮಂಜುನಾಥ ಭಟ್ ಕನ್ನಡ ಪ್ರತಿಷ್ಠಾನದ ವತಿಯಿಂದ ಸುಭದ್ರಮ್ಮ ಮಂಜುನಾಥ್ ಭಟ್ ಸಂಸ್ಕಾರಣಾರ್ಥ ಮಲೆನಾಡ ಮಡಿಲಲ್ಲಿ ಕನ್ನಡೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಉದ್ಘಾಟನೆ, ಪ್ರಶಸ್ತಿ ಪ್ರಧಾನ, ಕೃತಿಗಳ ಲೋಕಾರ್ಪಣೆ, ಉಪನ್ಯಾಸ ಗೀತ ಗಾಯನ ಗಮಕಾರ್ಥಗಾರಿಕೆ ಕವಿಗೋಷ್ಠಿ ಹೀಗೆ ಹಲವಾರು ಸಾಹಿತ್ಯ ಕಾರ್ಯಕ್ರಮಗಳು ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಗಣ್ಯರ ಉಪಸ್ಥಿತಿಯಿರಲಿದೆ.ಸಾಹಿತಾಸಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ಸತ್ಯಶೋಧ ಮಾಧ್ಯಮದ ಮೂಲಕ ಆಯೋಜಕರು ಮನವಿ ಮಾಡಿದ್ದಾರೆ.
