Oplus_131072

ತೀರ್ಥಹಳ್ಳಿ ಕಂಡ ಅಪರೂಪದ ವ್ಯಕ್ತಿ, ಇಂಜಿನಿಯರ್ ಗಳಿಗೆ ಆದರ್ಶಪ್ರಾಯರಾಗಿದ್ದ ಇವರು ಇತ್ತೀಚಿಗೆ ಇಹಲೋಕ ತ್ಯಜಿಸಿದರು.ಆಳವಾದ ಜ್ಞಾನ, ಕ್ರಿಯಾಶೀಲತೆಗೆ ಹೆಸರುವಾಸಿಯಾಗಿದ್ದ ಇವರು ಬದುಕಿನುದ್ದಕ್ಕೂ ಅಪಾರ ಸ್ನೇಹಿತರನ್ನು ಅಭಿಮಾನಿಗಳನ್ನು ಹೊಂದಿದ್ದರು.

ಕೆ ಪಿ ಚಿನ್ನಪ್ಪ ಹೆಗ್ಡೆ ವ್ಯಕ್ತಿತ್ವ ಪರಿಚಯ :

ಕೆ ಪಿ ಚಿನ್ನಪ್ಪ ಹೆಗ್ಡೆ ಇವರು ಮೇಗರವಳ್ಳಿ ಯ ಕೆಳಗಿನ ಮನೆಯವರು. ಪುಟ್ಟಪ್ಪ ಹೆಗ್ಡೆ ಹಾಗೂ ಮೋಟಮ್ಮ ದಂಪತಿಗಳ ಪುತ್ರ ರಾಗಿದ್ದು, ಮೇಗರವಳ್ಳಿ ಯಲ್ಲಿ 1957ರಲ್ಲಿ ಎಸ್ ಎಸ್ ಎಲ್ ಸಿ ಮುಗಿಸಿದ ನಂತರ ಶಿವಮೊಗ್ಗ ದಲ್ಲಿ ಸಿವಿಲ್ ಇಂಜಿನಿಯರ್ ಮಾಡಿದ್ದಾರೆ. ನಂತರ 1962 ಪವರ್ ಕಾರ್ಪೂರೆಷನ್ ಎ ಇ ಆಗಿ ವೃತ್ತಿ ಜೀವನವನ್ನು ಆರಂಭಿಸಿದರು. ನಂತರದ ದಿನಗಳಲ್ಲಿ ಆ ವೃತ್ತಿಯನ್ನು ತೊರೆದು ಜೆ ಇ ಆಗಿ ಪಿ ಡಬ್ಲ್ಯೂ ಡಿ ನ್ಯಾಷನಲ್ ಹೆದ್ದಾರಿ ಯಲ್ಲಿ ಕೆಲಸ ವನ್ನು ಆರಂಭಿಸಿ ಡೆಪ್ಯೂಟೇಷನ್ ಮೇಲೆ ಕೆ ಎಚ್ ಬಿ ಯಲ್ಲಿ ಸತತವಾಗಿ 5 ವರ್ಷಗಳ ಕಾಲ ಕೆಲಸ ಮಾಡಿ ನೀರಾವರಿ ಇಲಾಖೆ ವೃತ್ತಿಯ ಬಳಿಕ ನಿವೃತ್ತಿ ಹೊಂದಿದರು.

ಇವರು ಮಂಗಳೂರು, ಕಡೂರು, ಶೃಂಗೇರಿ, ಕುಂದಾಪುರ, ಹೊನ್ನಾವರ, ಕೊಪ್ಪ, ಹಾಸನ, ಬೆಂಗಳೂರು, ಶಿವಮೊಗ್ಗ ಮುಂತಾದ ರಾಜ್ಯದ ಹಲವಾರು ಕಡೆಗಳಲ್ಲಿ ಕಾರ್ಯನಿರ್ವಹಿಸಿದ ಕೀರ್ತಿ ಇವರಿಗಿದೆ. ಆರ್ &ಬಿ ಯಂತಹ ದೊಡ್ಡ ದೊಡ್ಡ ವೃತ್ತಿ ಪರ ಸೇವೆಯಲ್ಲೂ ಇವರು ಛಾಪು ಮೂಡಿಸಿದ್ದು, ರಚನಾತ್ಮಕ ಶಕ್ತಿ, ಉತ್ತಮ ಆಲೋಚನೆ, ಯೋಜನೆ, ಬಳಕೆದಾರರ ಇಂಟರ್ ಫೇಸ್, ಬಳಕೆದಾರರ ಅನುಭವಕ್ಕಾಗಿ ಇಲಾಖೆಯ ಒಳಗೂ ಹೊರಗೂ ಹಲವಾರು ಜನ ಸಂಪರ್ಕಿಸುತ್ತಿದ್ದರು

Oplus_131072

.ಮುಂದಿನ ಪೀಳಿಗೆಗೆ ಪೂರಕವಾಗುವ ಸಲಹೆ ಸಹಕಾರ ನೀಡುವುದು, ಕೃಷಿ ಬಗ್ಗೆ ಅಪಾರವಾದ ಬಯಕೆ ಹೊಂದಿದ್ದವರು ಇಂದು ನಮ್ಮೊಂದಿಗಿಲ್ಲ ಎಂಬುದು ಬೇಸರದ ಸಂಗತಿ.ಕೆ ಪಿ ಚಿನ್ನಪ್ಪ ಹೆಗ್ಡೆ ಇವರು ಮಕ್ಕಳಾದ ಡಾ ಆದರ್ಶ್, ಹಾಗೂ

ಅಶ್ವಿನಿ ಸಿ ರಾಮಚಂದ್ರ ಜೊತೆಗೆ ಮೂವರು ಸಹೋದರಿಯರು ಹಾಗೂ ಇಬ್ಬರು ಸಹೋದರರ ಜೊತೆಗೆ ಅಪಾರ ಬಂಧುಗಳನ್ನು ಅಭಿಮಾನಿಗಳನ್ನು ಅಗಲಿದ್ದಾರೆ. ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಸತ್ಯಶೋಧ ಮಾಧ್ಯಮದ ಆಶಯವಾಗಿದೆ.

Oplus_131072

Leave a Reply

Your email address will not be published. Required fields are marked *