- ತಮಿಳಿನ ಈ ಕಾದಂಬರಿಗೆ 2 ನೇ ಬಹುಮಾನ

ನಾಡಿನ ಸುಪ್ರಸಿದ್ಧ ಚಿಂತಕರಾದ ನಾಡೋಜ ಬರಗೂರು ರಾಮಚಂದ್ರಪ್ಪ ಅವರ. ‘ಕಸ್ತೂರ್ ಬಾ vsಗಾಂಧಿ’ ಕಾದಂಬರಿಯನ್ನು ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿರುವ ಮಲರ್ ವಿಳಿ. ಕೆ ಮತ್ತು ತಮಿಳು ನಾಡಿನ ಕವಯಿತ್ರಿ ಮಧುಮಿತ ತಮಿಳಿಗೆ ಅನುವಾದಿಸಿದ್ದಾರೆ.ಬರಗೂರರ ಈ ತಮಿಳು ಕಾದಂಬರಿಗೆ ಎರಡನೆಯ ಬಹುಮಾನ ಸಂದಿದೆ. ಆಗಸ್ಟ್ ೧೫ ೨೦೨೪ ರಂದು ತಮಿಳು ನಾಡಿನ ಮಧುರೈ ಸಮೀಪವಿರುವ ಕಂಬಂ ನಲ್ಲಿ ಅಂತರರಾಷ್ಟ್ರೀಯ ಮಟ್ಟದ “ಭಾರದಿ ತಮಿಳ್ ಇಲಕ್ಕಿಯ ಪೇರವೈ” ಎಂಬ ಪ್ರಶಸ್ತಿ ಯನ್ನು ನೀಡಿ ಗೌರವಿಸಿದೆ.ಸೂಚನೆ: ರಾಷ್ಟ್ರ ಭಕ್ತರಾದ ಕೆ. ಟಿ. ಸೋಮನಾದನ್ ಇವರು ಸುಭಾಷ್ ಚಂದ್ರ ಬೋಸ್ ಅವರ ಇಂಡಿಯನ್ ನ್ಯಾಷನಲ್ ಆರ್ಮಿಯಲ್ಲಿ ಅಧಿಕಾರಿಯಾಗಿದ್ದು ನೇತಾಜಿಯವರ ಭಾಷಣಗಳನ್ನು ಅನುವಾದಿಸುತ್ತಿದ್ದರಂತೆ.ಶ್ರೀ ಕೆ. ಟಿ. ಸೋಮನಾದನ್ ಅವರ ಪುತ್ರರಾದ ಶ್ರೀ ಭಾರದನ್ ಅವರು ಕಂಬಂ ನಲ್ಲಿ ೧೯೮೦ ರಲ್ಲಿ ” ಭಾರದಿ ತಮಿಳ್ ಇಲಕ್ಕಿಯ ಪೇರವೈ ಎಂಬ ಪ್ರತಿಷ್ಠಾನ ವನ್ನು ಸ್ಥಾಪಿಸಿ ಕಳೆದ ಹದಿನೆಂಟು ವರ್ಷಗಳಿಂದ ಅರ್ಹ ಕೃತಿಗಳಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿದ್ದಾರೆ.


