- ಎರಡು ಸಾವಿರ ವರ್ಷಗಳ ಹಿಂದಿನ ಸಂಗಂ ಸಾಹಿತ್ಯ: ಪುರನಾನೂರು

( ಏಳು ಜನ ಮಡಿದು ಈಗಿರುವ ದಾನಿ ನೀ ಒಬ್ಬ ತಾನೇ)ಮುದಿರಂ ಎಂಬುದು ಒಂದು ಮಲೆ; ಉಡುಮಲೈಪೇಟ್ಟೈ ಬಳಿ ಇರುವ ಕುದಿರೈ ಮಲೆಯೇ ಈಗಿನ ಮುದಿರಮಲೈ. ಕುಮಣನ್ ಇದರ ನಾಯಕ, ಇವನ ತಮ್ಮ ಇಳಂಗುಮಣನ್. ಅಣ್ಣನಾದ ಕುಮಣನ್ʼನ ದಾನ ಮತ್ತು ಕೀರ್ತಿಯ ಉನ್ನತಿಯನ್ನು ಕಂಡು ತಮ್ಮನಿಗೆ ಆಕ್ರೋಶ; ಆತುರ; ಸ್ವತ್ತು ಎಲ್ಲಿ ವಿನಾಶವಾಗುವುದೋ? ಎಂಬ ಕಾರಣದಿಂದ ಯುದ್ಧ ಮಾಡಿ ಕುಮಣನನ್ನು ಕಾಡಿಗೆ ಅಟ್ಟಿಬಿಟ್ಟನು. ಕಾಡಿನಲ್ಲಿರುವ ಅರಸನಾದ ಕುಮಣನ್ʼನನ್ನು ಕಾಣಲು ಪೆರುಂಚಿತ್ತಿರನಾರ್ ಎಂಬ ಕವಿ ಬಂದರು.
ಹಾಡು

ವಿಶೇಷಾಂಶ: ಕುಮಣನ್ ಎಂಬ ಅರಸನನ್ನು ಕುರಿತು ಕವಿ ಪೆರುಂಚಿತ್ತಿರನಾರ್ ಹಾಡಿದುದು. ಲೇಖಕರ ಪರಿಚಯ:ಪ್ರಸಿದ್ಧ ತಮಿಳು ಪ್ರಾಧ್ಯಾಪಕರು ಪದ್ಮಶ್ರೀ ಪ್ರಶಸ್ತಿ ವಿಜೇತರು ಪ್ರೊ. ಸಾಲಮನ್ ಪಾಪಯ್ಯ ಅವರು ಮಧುರೈಯ ಅಮೇರಿಕನ್ ಕಾಲೇಜಿನಲ್ಲಿ ತಮಿಳು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ.ಪ್ರಸಿದ್ಧ ಲೇಖಕರು ಹಾಗೂ ಅತ್ಯುತ್ತಮ ವಾಗ್ಮಿ, ನಟರು, ಸರಳ ಸಜ್ಜನಿಕೆಯ ಬಹುಮುಖ ಪ್ರತಿಭಾವಂತರು. ತಮಿಳಿನ ಅರಟ್ಟೈ ಅರಂಗಂ ಎಂಬ ಟಿ . ವಿ. ಕಾರ್ಯಕ್ರಮದ ಮೂಲಕ ಜಗತ್ಪಪ್ರಸಿದ್ಧರುಹಾಗೂ ತಿರುಕ್ಕುರಳ್ ನ ತಾತ್ಪರ್ಯವನ್ನು ಶ್ರೀ ಸಾಮಾನ್ಯರಿಗೂ ಅರ್ಥವಾಗುವಂತೆ ವಿವರಿಸಿ ಜನಮನ್ನಣೆ ಪಡೆದವರುಪ್ರಸ್ತುತ ಪುರನಾನೂರು ಹಾಗೂ ಅಗನಾನೂರು ಎಂಬ ತಮಿಳಿನ ಸಂಗಂ ಕೃತಿಗಳನ್ನು ಪಂಡಿತರಿಗೂ , ಪಾಮರರಿಗೂ ಅರ್ಥವಾಗುವಂತೆ ಸರಳವಾಗಿ ಪದ್ಯವನ್ನು ಬರೆದಿದ್ದಾರೆ. ಮುನ್ನುಡಿಯಂತೂ ಒಂದು ಸಂಶೋಧನಾ ಕೃತಿಯಲ್ಲಿರಬಹುದಾದ ಎಲ್ಲ ಅಂಶಗಳನ್ನೂ ಒಳಗೊಂಡಿದೆ.

ತಮಿಳು ಮೂಲ: ಪ್ರೊ. ಸಾಲಮನ್ ಪಾಪಯ್ಯ
ಅನುವಾದ: ಡಾ. ಮಲರ್ ವಿಳಿ ಕೆ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ






