
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಕಳೆದ 45 ದಿನಗಳಿಂದ ನಡೆದ 144 ವರ್ಷಗಳ ನಂತರ ನಡೆದ ಮಹಾಕುಂಭ ಮೇಳ ಸಂಪನ್ನಗೊಂಡಿದ್ದು, ಇದೀಗ ಮುಂದಿನ ಬಾರಿ ಯಾವಾಗ ಮತ್ತು ಎಲ್ಲಿ ಕುಂಭ ಮೇಳ ನಡೆಯುತ್ತದೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಮಹಾಕುಂಭ ಮೇಳ ೨೦೨೫ ಮಹಾಶಿವರಾತ್ರಿ ದಿನದಂದು ಸಂಪನ್ನಗೊಂಡಿದೆ.

ದಾಖಲೆಯ 66 ಕೋಟಿ ಜನರು ಪುಣ್ಯಸ್ನಾನ ಮಾಡಿದ್ದಾರೆ.ಇದೀಗ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮವಾಗಿ ತ್ರಿವೇಣಿ ಸಂಗಮ ಸೇರಿದಂತೆ ಪ್ರಯಾಗ್ ರಾಜ್ ನಲ್ಲಿ ಸ್ಚಚ್ಛತಾ ಕಾರ್ಯಗಳು ಆರಂಭವಾಗಿವೆ.ಸು 15000 ಜನರಿಂದ ಸ್ವಚ್ಛತೆ ಮಾಡುವ ಕಾರ್ಯಕ್ರಮ ನಡೆಯಲಿದ್ದು ಇದು ಕೂಡ ಇತಿಹಾಸ ಸೃಷ್ಟಿಸಲಿದೆ.



