ಮಲೆನಾಡು : ಮಲೆನಾಡು ಹೆಚ್ಚುಕಮ್ಮಿ ಮಳೆಯಿಲ್ಲದೇ ಹಳ್ಳ,ನದಿ,ತೊರೆಗಳು ಬತ್ತಿ ಹೋಗಿ ಕುಡಿಯಲು ನೀರಿಲ್ಲದೆ ಪ್ರಾಣಿ ಪಕ್ಷಿಗಳು ಕೂಡ ಬಿಸಿಲ ಜಳಕ್ಕೆ ತುತ್ತಾಗಿದ್ದು ಇದೀಗ ಮಲೆನಾಡಿಗೆ ಮಳೆರಾಯನ ಆಗಮನ ರೈತರಿಗೂ ಹೊಸ ಹುಮ್ಮಸ್ಸು ತಂದಿದ್ದು ಯುಗಾದಿ ನಂತರ ಮಳೆಯಾಗಲಿದೆ ಎಂಬ ನಂಬಿಕೆ ನಿಜವಾಗಿದೆ.

ಇನ್ನು ಏಪ್ರಿಲ್​ 18ರವರೆಗೆ ಕರ್ನಾಟಕದ 25ಕ್ಕೂ ಹೆಚ್ಚಿನ ಜಿಲ್ಲೆಗಳಲ್ಲಿ ಮಳೆ ಆಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದೆ.ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, , ಕೊಡಗು, ಮೈಸೂರು, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ.

Leave a Reply

Your email address will not be published. Required fields are marked *