Oplus_131072

ತೀರ್ಥಹಳ್ಳಿ : ತಾಲೂಕಿನ ಮೇಗರವಳ್ಳಿಯ ಬೈಕ್‌ ಮೆಕ್ಯಾನಿಕ್‌ ನರಸಿಂಹಮೂರ್ತಿ ಪ್ರಭು ಇವರ ಪುತ್ರ ಸುಶಾಂತ್‌ ಎನ್‌.ಪ್ರಭುಗೆ ಬಿ.ಟೆಕ್‌.ಅಧ್ಯಯನಕ್ಕೆ ಉತ್ತರ ಪ್ರದೇಶದ ಐಐಟಿ-ಕಾನ್ಪುರದಲ್ಲಿ ಸೀಟು ಸಿಕ್ಕಿದೆ.ತನ್ನ 13 ನೇ ವಯಸ್ಸಿನಿಂದಲೂ ಇಂಜಿನ್ ಗಳನ್ನು ನಿರ್ವಹಿಸುತ್ತಿರುವುದು ಹಾಗೂ ಓದುವುದರಲ್ಲಿ ಆಸಕ್ತಿ ಹೊಂದಿದ್ದ ಸುಶಾಂತ್ ಎಸೆಸೆಲ್ಸಿವರೆಗೆ ಸರಕಾರಿ ಶಾಲೆಯಲ್ಲಿ ಓದಿದ್ದು ಇದೀಗ ಐಐಟಿಯಲ್ಲಿ ಬಿ.ಟೆಕ್‌ ಸೀಟು ಸಿಕ್ಕಿದ್ದು ತೀರ್ಥಹಳ್ಳಿಗೆ ಕೀರ್ತಿ ತಂದಿದ್ದಾನೆ.

ಇನ್ನು ಈ ಸಂದರ್ಭದಲ್ಲಿ ತಂದೆ ನರಸಿಂಹ ಪ್ರಭು ಹಾಗೂ ತಾಯಿ ಸುಜಾತ ಕಷ್ಟಪಟ್ಟು ದುಡಿದು ಓದಿಸಿದಕ್ಕೆ ಸಾರ್ಥಕವಾಗಿದೆ ಮಗನ ಸಾಧನೆ ಅತೀವ ಖುಷಿ ತಂದಿದೆ ಎಂದರು. ಸುಶಾಂತ್ ನ ಸಾಧನೆಗೆ ಮೆಚ್ಚಿ ಐ ಎ ಎಸ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು

ಜೊತೆಗೆ ತೀರ್ಥಹಳ್ಳಿ ತಾಲೂಕಿನ ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ಆದ ರಾಘವೇಂದ್ರ ಕಾಮತ್, ಅಸಿಸ್ಟೆಂಟ್ ಮ್ಯಾನೇಜರ್ ಮಹನ್ ಬಾಬ್, ಮೇಗರವಳ್ಳಿ ಮಂಜುನಾಥ್ ಕಾಮತ್ , ಹಾಗೂ ಬ್ಯಾಂಕ್ ಸಿಬ್ಬಂದಿಗಳು ಬಂದು ಸನ್ಮಾನಿಸಿ ಶುಭ ಹಾರೈಸಿದರು. ಜೊತೆಗೆ ಮೇಗರವಳ್ಳಿ ಗ್ರಾಂ ನಿಂದ ಕೂಡ ಸನ್ಮಾನ ಮಾಡಿದ್ದಾರೆ.

Oplus_131072

2022ರಲ್ಲಿ ಬೈಕ್‌ಗಳಿಗಾಗಿ ಹೊಸ ಮಾದರಿಯ “ಸೆಲ್‌ -ಚೈನ್‌ ಅಡ್ಜಸ್ಟ್‌ಮೆಂಟ್‌ ಸಿಸ್ಟಮ್ ಅಭಿವೃದ್ಧಿ ಪಡಿಸಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನ್ಯಾಷನಲ್‌ ಇನ್ನೊವೇಶನ್‌ಫೌಂಡೇಷನ್‌ ಆಯೋಜಿಸಿದ್ದ ಇನ್‌ಸ್ಪೈರ್‌ ಅವಾರ್ಡ್ಸ್‌ ಮಾನಕ್‌ ಎಂಬ ರಾಷ್ಟ್ರಮಟ್ಟದ ಪ್ರದರ್ಶನ ಮತ್ತು ಸ್ಪರ್ಧೆಗೆ ಅವರ ಯೋಜನೆಯನ್ನು ಆಯ್ಕೆ ಮಾಡಲಾಯಿತು.

Oplus_131072

2022ರ ಮೇ ತಿಂಗಳಲ್ಲಿ ದಕ್ಷಿಣ ಕನ್ನಡದ ಸುರತ್ಕಲ್‌ನಲ್ಲಿರುವ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಎನ್‌ಐಟಿಕೆ)ಗೆ ಭೇಟಿ ನೀಡಿದ್ದು, ಅಲ್ಲಿನ ಕ್ಯಾಂಪಸ್‌ ಮತ್ತು ಸಂಸ್ಥೆಯಿಂದ ತುಂಬಾ ಪ್ರಭಾವಿತನಾಗಿದ್ದ. ಈತನಿಗೆ ಸಿವಿಲ್‌ ಸರ್ವಿಸ್‌ ಪರೀಕ್ಷೆ ಬರೆಯುವ ಗುರಿ ಹೊಂದಿದ್ದು,

ಜೊತೆಗೆ ಯಕ್ಷಗಾನ, ಚಿತ್ರಕಲೆ, ಮಣ್ಣಿನ ಮಾದರಿ ಹೀಗೆ ಹಲವಾರು ಕ್ಷೇತ್ರದಲ್ಲಿ ಸಾಧನೆ ಮಾಡಿದ್ದು ಹಲವಾರು ಪ್ರಶಸ್ತಿ ಸನ್ಮಾನಗಳು ಸುಶಾಂತ್ ನ ಅರಸಿ ಬಂದಿದೆ.ತಾನು ಮುಂದಿನ ದಿನಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿ ತನ್ನ ಊರಿನ ಹಲವಾರು ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸಿಕೊಡೋದಾಗಿ ಸತ್ಯಶೋಧ ಮಾಧ್ಯಮದ ಮುಂದೆ ತನ್ನ ಆಸೆ ಕನಸನ್ನ ಹೇಳಿಕೊಂಡರು.

Oplus_131072

Leave a Reply

Your email address will not be published. Required fields are marked *