- ಪ್ರೀತಿಯ ಹಸು ಮಾರಿ ಬಂದ 78000 ಸಾವಿರ ದೇವಸ್ಥಾನದ ಜೀರ್ಣೋದ್ದಾರಕ್ಕೆ ಕೊಡುಗೆ

ಆಗುಂಬೆ ಹೋಬಳಿಯ ಬಾಳೆಹಳ್ಳಿ ಗ್ರಾಮದ ತಲ್ಲೂರಂಗಡಿಯ ಅಷ್ಟ ಗ್ರಾಮದ ಅಧಿದೇವತೆ ಶ್ರೀ ಗುತ್ಯಮ್ಮ ದೇವಿಯ ದೇವಸ್ಥಾನ ದ ಜೀರ್ಣೋದ್ದಾರಕ್ಕೆ ತಮ್ಮ ಮನೆಯಲಿದ್ದ ಉತ್ತಮ ತಳಿಯ ‘ಹೆಚ್ ಎಫ್ ‘ ಸಿಂಧಿ ಹಸುವನ್ನು ಮಾರಾಟ ಮಾಡಿ ಅದರಿಂದ ಬಂದ 78000 ಸಾವಿರ ಹಣವನ್ನು ಶ್ರೀ ಗುತ್ಯಮ್ಮ ದೇವಸ್ಥಾನದ ಜೀರ್ಣೋದ್ದಾರಕ್ಕೆ ಚೆಕ್ ಮುಖಾಂತರ ಎರಡನೇ ಭಾರಿ (ಈ ಹಿಂದೆ 50000) ದೇಣಿಗೆ ನೀಡುವುದರ ಮೂಲಕ “ಮನಸ್ಸಿದ್ದರೆ ಮಾರ್ಗ” ಎಂಬ ಗಾದೆಯನ್ನು ‘ನೃಪತುಂಗ ಹೋಂ ಸ್ಟೇ’ ಮಾಲೀಕರಾದ ಉದಯ ಕುಮಾರ್ ನೆನಪಿಸಿದ್ದಾರೆ.ದೇವಸ್ಥಾನದ ಜೀರ್ಣೋದ್ದಾರ ಕಾರ್ಯವು ಕಳೆದ ಎಂಟು ತಿಂಗಳಿಂದ ಭರದಿಂದ ಸಾಗುತಿದ್ದು, ಗರ್ಭ ಗುಡಿಯ ಕೆಲಸವನ್ನು ಪೂರ್ಣಗೊಳಿಸಿ ಕಳೆದ ಏಪ್ರಿಲ್ನಲಿಯೇ ಮರು ಪ್ರತಿಷ್ಠಾಪನೆ ಮಾಡಬೇಕೆಂಬ ಉದ್ದೇಶ ಆಡಳಿತ ಮಂಡಳಿಯ ಆಶಯವಾಗಿತ್ತು.ಬಾಕಿ ಇರುವ ದೇವಸ್ಥಾನದ ಸುತ್ತು ಪೌಳಿ ಇನ್ನಿತರೇ ಕಾಮಗಾರಿಗಳನ್ನು ನಿಲ್ಲಿಸಿದಲ್ಲಿ ಆ ನಂತರ ಆಸಕ್ತಿ ಕಡಿಮೆ ಹಾಗೂ ದೇವಸ್ಥಾನಕ್ಕೆ ಹರಿದು ಬರುವ ಹಣವೂ ಕಡಿಮೆಯಾಗಿ ಆರ್ಥಿಕ ಸ್ಥಿತಿಗೆ ಧಕ್ಕೆಯಾಗ ಬಹುದೆಂಬ ದೂರ ದೃಷ್ಟಿಯನರಿತ ಊರಿನ ಗ್ರಾಮಸ್ಥರು ಹಾಗೂ ಆಡಳಿತ ಮಂಡಳಿ, ಪೂರ್ಣ ಕೆಲಸ ಮುಗಿಸಿಯೇ ಮರು ಪ್ರತಿಷ್ಠಾಪನೆ ಮಾಡಲು ತೀರ್ಮಾನಿಸಲಾಯಿತೇನ್ನಲಾಗಿದೆ. ಜುಲೈ ತಿಂಗಳಿನಲ್ಲಿ ವಿಪರೀತ ಮಳೆಯಾಗಿದ್ದು, ದೇವಸ್ಥಾನದ ಕೆಲಸ ಸ್ವಲ್ಪ ಸ್ಥಗಿತಗೊಂಡಿದ್ದು ಇದೀಗ ಮರುಚಾಲನೆಗೊಳ್ಳಳಿದೆ. ಸುಮಾರು 1.5 ಕೋಟಿಗೂ ಹೆಚ್ಚು ತಗಲುವ ಈ ಕಾಮಗಾ ರಿಗೆ ಈಗಾಗಲೇ ಸಾಕಷ್ಟು ಭಕ್ತರು ತಮ್ಮ ಮನಃ ಪೂರ್ವಕವಾಗಿ ಹಣ ಕೊಟ್ಟಿರುವುದಕ್ಕೆ ಆಡಳಿತ ಮಂಡಳಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ. ಇದೀಗ ಮುಂದುವರಿಯುವ ಕಾಮಗಾರಿಗಳಿಗೆ ಆ ದೇವಿಯ ಅನುಗ್ರವಿದೆ ಎಂಬುದನ್ನು ಅಗಸರಕೋಣೆ ಹೋಂ ಸ್ಟೇ ಮಾಲೀಕರಾದ ಉದಯ ಕುಮಾರ್ ರವರು ಈ ರೂಪದಲ್ಲಿಯು ಹಣ ಕೊಡ ಬಹುದೆಂಬುವುದನ್ನು ತೋರಿಸಿ, ಔದಾರ್ಯವನ್ನು ಮೆರೆದಿದ್ದಾರೆ. ಅವರಿಗೆ ಹಾಗೂ ಅವರ ಕುಟುಂಬಕ್ಕೆ ಆ ದೇವಿಯು ಆಯೂರಾರೋಗ್ಯ-ಐಶ್ವರ್ಯ ಕಲ್ಪಿಸಲೆಂದು ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು ಹಾರೈಸಿ ಅಭಿನಂದಿಸಿದ್ದಾರೆ.



